ಈ ಬಾರಿ ಗುಜರಾತಿಗೆ ಐಪಿಎಲ್‌ ಕಪ್‌, ಮೋಟಾಬಾಯಿ ಖಚಿತಪಡಿಸಬೇಕು: ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

ಬೆಂಗಳೂರು: ಗುಜರಾತ್ ಟೈಟಾನ್ಸ್ ಈ ಬಾರಿ ಸ್ಪಷ್ಟ ಕಾರಣಗಳಿಂದಾಗಿ ಐಪಿಎಲ್ ಕಪ್ ಗೆಲ್ಲಬಹುದು ಎಂದು ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.

ಐಪಿಎಲ್ ಅಂಕಪಟ್ಟಿಯನ್ನು ಅಪ್ಲೋಡ್‌ ಮಾಡಿ ಪ್ರಿಯಾಂಕ್‌ ಖರ್ಗೆ ಮೋಟಾಬಾಯಿ ಮತ್ತು ಅವರ ಮಗ ಇದನ್ನು ಖಚಿತಪಡಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಮತ್ತು ಬಿಸಿಸಿಐ ಕಾರ್ಯರ್ದದರ್ಶಿ ಜಯ್‌ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದು, ಡಿಕೆಶಿ ಇಬ್ಬರಿಗೂ ಮುಸ್ಲಿಮರೇ ಬೇಕು: ಪ್ರತಾಪ್ ಸಿಂಹ

ಇಷ್ಟೇ ಅಲ್ಲದೇ ಐಟಿ, ಇಡಿ, ಸಿಬಿಐ ಮೊದಲಾದವು ಯಾವಾಗ ಬೇಕಾದರು ಕೆಲಸಕ್ಕೆ ಬರಬಹುದು ಎಂದು ಬರೆದು ಕಾಲೆಳೆದಿದ್ದಾರೆ. ಈ ಟ್ವೀಟ್‌ಗೆ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಮೊದಲ ಬಾರಿ ಐಪಿಎಲ್‌ ಆಡುತ್ತಿರುವ ಗುಜರಾತ್‌ ಟೈಟನ್ಸ್‌ ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿದೆ. ಆಡಿರುವ 12 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದು 18 ಅಂಕ ಸಂಪಾದಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಲಕ್ನೋ ತಂಡ 16 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿದೆ.

Comments

Leave a Reply

Your email address will not be published. Required fields are marked *