ಕುಂದಾಪುರದಲ್ಲಿ ಗೋವು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ಜಿಲ್ಲೆಯಾದ್ಯಂತ ಗೋವು ಕಳ್ಳರ ಅಟ್ಟಹಾಸ ಜಾಸ್ತಿಯಾಗಿದೆ. ರಸ್ತೆ ಬದಿ ಮಲಗುವ ಹಸುಗಳನ್ನೆಲ್ಲ ಕಳ್ಳತನ ಮಾಡುತ್ತಿರುವ ಕಳ್ಳರು ಕೊಟ್ಟಿಗೆಗೂ ನುಗ್ಗಿ ಹಸುಗಳ ಕಳ್ಳತನ ಮಾಡುತ್ತಿದ್ದಾರೆ. ಈ ನಡುವೆ ಕುಂದಾಪುರ ತಾಲೂಕಿನಲ್ಲಿ ನಡೆದ ಗೋವು ಕಳ್ಳತನದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುಂದಾಪುರ ತಾಲೂಕಿನ ಸಿದ್ದಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಬಸ್ರೂರು ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಗೋವು ಕಳ್ಳತನ ನಡೆಸಲು ದುಷ್ಕರ್ಮಿಗಳು ವಿಫಲ ಯತ್ನಿ ನಡೆಸಿದ್ದಾರೆ. ಈ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲೇನಿದೆ?:
ತಡರಾತ್ರಿ 1 ಗಂಟೆ 45 ಸುಮಾರಿಗೆ ಹೆದ್ದಾರಿಯಲ್ಲಿ ಬಿಳಿಬಣ್ಣದ ರಿಟ್ಜ್ ಕಾರು ಬಂದು ನಿಲ್ಲುತ್ತದೆ. ಕಾರಿನಿಂದ ಒಬ್ಬೊಬ್ಬರಾಗಿ ನಾಲ್ವರು ಮುಸುಕುಧಾರಿಗಳು ಇಳಿದು ಬರುತ್ತಾರೆ. ಪೆಟ್ರೋಲ್ ಬಂಕಿನೊಳಗೆ ಬಂದು ಅಲ್ಲಿದ್ದ ಬಿಡಾಡಿ ಗೋವುಗಳನ್ನು ಹಿಡಿಯಲು ಯತ್ನ ನಡೆಸುತ್ತಾರೆ. ಕೊನೆಗೆ ಕರುವೊಂದು ಕೈಗೆ ಸಿಗಬೇಕೆನ್ನುವ ಹೊತ್ತಲ್ಲಿ ಯಾವುದೋ ವಾಹನದ ಬರುವಿಕೆಗೆ ಬೆದರಿ ನಾಲ್ವರು ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗುತ್ತಾರೆ.

ಇದೇ ಜಾಗದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಎರಡು ಹಸುಗಳನ್ನು ಕಾರಲ್ಲಿ ತುಂಬಿ ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಕಳೆದ 10 ವರ್ಷದಿಂದ ಗೋವು ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.

ವಿಶ್ವ ಹಿಂದೂ ಪರಿಷದ್ ಮುಖಂಡ ಸುನೀಲ್ ಮಾತನಾಡಿ, ಈ ಒಂದು ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿರಬಹುದು. ಇಂತಹ ಸಾವಿರ ಕಳ್ಳತನ ನಡೆಯುತ್ತಿದ್ದರೂ ಕಾನೂನಾತ್ಮಕ ಕ್ರಮ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಟ್ಟಿಯಿಂದ ಹಸು ಕಳ್ಳತನ ಆಗುತ್ತಿದೆ. ಕೃಷಿಕರು ಹಸು ಸಾಕಣೆಗೆ ಹಿಂದೇಟು ಹಾಕುವ ಪರಿಸ್ಥಿತಿ ಕರಾವಳಿಯಲ್ಲಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.

https://www.youtube.com/watch?v=10DMOxtJCiY

Comments

Leave a Reply

Your email address will not be published. Required fields are marked *