ಮೊಮ್ಮಕ್ಕಳ ಪಾಲಿಗೆ ವಿಲನ್ ಆದ ಅಜ್ಜ!

ಯಾದಗಿರಿ: ತಂದೆಗೆ ಬರುವ ಆಸ್ತಿ ಪಾಲು ಕೇಳಿದ ಮೊಮ್ಮಕ್ಕಳ ಪಾಲಿಗೆ ಅಜ್ಜ ವಿಲನ್ ಆಗಿದ್ದಾನೆ. ಖಳನಾಯಕನಂತೆ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಮೊಮ್ಮಕ್ಕಳಿಗೆ ಥಳಿಸಿದ್ದಾನೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೊಮ್ಮಕ್ಕಳಾದ ಗೋವಿಂದ ಹಾಗೂ ವಿಜಯಲಕ್ಷ್ಮಿ, ಸೊಸೆಯಾದ ಹುಲಿಗೆಮ್ಮ ಆಸ್ತಿ ಹಾಗೂ ರಾಶಿ ಮಾಡಿರುವ ತಮ್ಮ ಪಾಲಿನ ಭತ್ತ ಕೇಳಿದ್ದಾರೆ. ಆದ್ರೆ ಅಜ್ಜ ಯಂಕಣ್ಣ ದೊಣ್ಣೆ ಹಿಡಿದುಕೊಂಡು ಹೊಡೆದಿದ್ದಾರೆ.

ತಾತ ಹಾಗೂ 8 ಜನ ಸೇರಿ ಹಲ್ಲೆ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ಈ ಘಟನೆ ಜರುಗಿದೆ. ಘಟನೆಯಲ್ಲಿ ಮೊಮ್ಮಕಳು ಹಾಗೂ ಸೊಸೆಗೆ ಗಾಯವಾಗಿದ್ದು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆಯಾದ ನಿನ್ನ ಮಗ ಅನೈತಿಕ ಸಂಬಂಧ ಹೊಂದಿದ್ದಾನೆ. ನೀನಾದರೂ ಆಸ್ತಿಯಲ್ಲಿ ಪಾಲು ನೀಡೆಂದು ಮೊಮ್ಮಕ್ಕಳು ಅಜ್ಜನ ದುಂಬಾಲು ಬಿದ್ದಿದ್ದಾರೆ.

ಅಜ್ಜನ ವಿರುದ್ಧ ಈಗ ಮೊಮ್ಮಗ ಗೋವಿಂದ ದೂರು ನೀಡಿದ್ದಾನೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *