ಭತ್ತ ಬೆಳೆಯೋಕೆ ಸಿದ್ಧರಾದ ರೈತರಿಗೆ ರಾಗಿ ಬೆಳೆಯಿರಿ ಎಂದ ಸರ್ಕಾರ

ಮೈಸೂರು: ಭತ್ತ ಬೆಳಯೋಕೆ ಸಿದ್ಧವಾಗಿದ್ದವರಿಗೆ ಸರ್ಕಾರ ರಾಗಿ ಬೆಳೆಯಿರಿ ಎಂದು ಹೇಳಿದ್ದರಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯ ಕೆ.ಆರ್. ನಗರ ತಾಲೂಕು ಭತ್ತದ ಕಣಜ. ಇಲ್ಲಿ ಬರೋಬ್ಬರಿ 17 ಸಾವಿರ ಹೆಕ್ಟೇರ್‍ನಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಭತ್ತದ ಕೃಷಿಗಾಗಿ ರೈತರು ಭೂಮಿಯನ್ನು ಹದ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದಿಢೀರನೆ ರೈತರಿಗೆ ಈ ಬಾರಿ ಭತ್ತ ಬೆಳೆಯಬೇಡಿ ಬದಲಾಗಿ ರಾಗಿ ದ್ವಿಧಳ ಧಾನ್ಯಗಳನ್ನು ಬೆಳೆಯಿರಿ ಎಂದು ಆದೇಶ ನೀಡಿದೆ.

ಒಂದು ವೇಳೆ ಭತ್ತ ಬೆಳೆದು ನೀರಿನ ಅಭಾವದಿಂದ ಬೆಳೆ ನಷ್ಟವಾದರೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ವಾಸ್ತವಾವಾಗಿ ಅಣೆಕಟ್ಟು ಸಮೀಪ ಇರುವ ಜಮೀನಿನಲ್ಲಿ ತೇವಾಂಶದ ಕಾರಣ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಆಗದು. ಹಾಗಂತ ಭತ್ತ ಬೆಳೆದು ಅದು ನಷ್ಟವಾದರೆ ಪರಿಹಾರ ಕೊಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳ ಈ ಹೇಳಿಕೆಯಿಂದ ರೈತರು ಏನು ಮಾಡಬೇಕು ಎಂದು ತಿಳಿಯದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ರೈತರೇ ಈಗಲೇ ಬಿತ್ತನೆ ಮಾಡಿ ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

 

Comments

Leave a Reply

Your email address will not be published. Required fields are marked *