ಗೋಡೆಯಲ್ಲಿ ಬಿರುಕು, ಬೀಳುವ ಸ್ಥಿತಿಯಲ್ಲಿ ಶಾಲೆ- ಗಂಡಾಂತರದಲ್ಲಿದೆ ಗಡಿನಾಡ ಕನ್ನಡ ಮಕ್ಕಳ ದೇಗುಲ

ಬೆಳಗಾವಿ: ಹೆಸರಿಗೆ ಅದು ಸರ್ಕಾರಿ ಶಾಲೆ ಕಟ್ಟಡ. ಆದ್ರೆ ಅದನ್ನ ನೋಡಿದವರಿಗೆ ಮಾತ್ರ ಅದು ಶಾಲೆ ಅಂತ ಅನ್ನಿಸೋದೇ ಇಲ್ಲ. ಮಕ್ಕಳು ಸದಾ ಭಯದಲ್ಲೇ ಕುಳಿತು ಪಾಠ ಕೇಳಬೇಕು. ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರದವಾಡ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ದುಸ್ಥಿತಿ.

ಶಿಥಿಲಾವಸ್ಥೆಯಲ್ಲಿರೋ ಗೋಡೆಗಳು, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಶಾಲೆಯನ್ನು ದುರಸ್ತಿ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಡಿರುವ ಮನವಿಗೆ ಲೆಕ್ಕವೇ ಇಲ್ಲ. ಆದ್ರೆ ಯಾವ ಅಧಿಕಾರಿಯೂ ಕನ್ನಡ ಶಾಲೆಯನ್ನು ಉಳಿಸಲು ಮುಂದೆ ಬಂದಿಲ್ಲ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚುತ್ತಿದ್ರೂ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗ್ತಿಲ್ಲ ಅನ್ನೋದೇ ವಿಪರ್ಯಾಸ.

 

Comments

Leave a Reply

Your email address will not be published. Required fields are marked *