ಟಿಪ್ಪು ಜಯಂತಿ ಆಚರಿಸಿದ ಸರ್ಕಾರದಿಂದ ಸ್ವಾಮಿ ವಿವೇಕಾನಂದರ ಜಯಂತಿ ಯಾಕಿಲ್ಲ: ಸಿಟಿ ರವಿ

ಬೆಂಗಳೂರು: ಶಾಂತಿ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಆಚರಿಸಲು ರಾಜ್ಯ ಸರ್ಕಾರ ಮರೆತಿದೆ ಅಂತ ಬಿಜೆಪಿ ನಾಯಕ ಸಿಟಿ ರವಿ ಕಿಡಿಕಾರಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಿಂದ ಎಲ್ಲೂ ಅಧಿಕೃತವಾಗಿ ವಿವೇಕಾನಂದ ಹುಟ್ಟುಹಬ್ಬ ಆಚರಣೆ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಯಾವ ಇಲಾಖೆಗಳಿಂದಲೂ ವಿವೇಕಾನಂದರ ಜಯಂತಿ ಆಚರಣೆ ಇಲ್ಲ. ಟಿಪ್ಪು ಜಯಂತಿ ಹಠ ಮಾಡಿ ಮಾಡೋ ಸರ್ಕಾರಕ್ಕೆ ವಿವೇಕಾನಂದರ ಜಯಂತಿ ಮಾಡೋದಕ್ಕೆ ಅಸಡ್ಡೆನಾ? ಕಾಂಗ್ರೆಸ್ ಸರ್ಕಾರ ವಿವೇಕಾನಂದರ ವಿಚಾರದಲ್ಲೂ ರಾಜಕೀಯ ಮಾಡ್ತಿದೆಯಾ ಅಂತ ಪ್ರಶ್ನಿಸಿದ್ದಾರೆ.

ಎಲ್ಲಾ ಜಯಂತಿಗಳನ್ನ ಘೋಷಣೆ ಮಾಡೋ ಸಿಎಂ ಸಿದ್ದರಾಮಯ್ಯಗೆ ವಿವೇಕಾನಂದರ ಜಯಂತಿ ಮಾಡೋಕೆ ಕಷ್ಟವಾಯ್ತು. ಒಟ್ಟಿನಲ್ಲಿ ರಾಜ್ಯ ಸರ್ಕಾರ ವಿವೇಕನಂದರನ್ನ ಮರೆತು ಹೋಯ್ತು ಅಂತ ಬಿಜೆಪಿ ಕಿಡಿಕಾರಿದೆ.

ಬಿಜೆಪಿ ವತಿಯಿಂದ ವಿವೇಕಾನಂದ ಪಾರ್ಕ್ ಗಿರಿನಗರ ವಾರ್ಡ್ ನಂಬರ್ 162ರ ವಿವೇಕಾನಂದ ಪಾರ್ಕಿನಲ್ಲಿ ಸ್ವಾಮಿ ವಿವೇಕಾನಂದರ 155ನೇ ಜಯಂತೋತ್ಸವ ಆಚರಣೆ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಹಾಗೂ ಬಸವನಗುಡಿ ಕ್ಷೇತ್ರ ಶಾಸಕ ರವಿಸುಬ್ರಮಣ್ಯ ಸಹ ಭಾಗಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *