ಸರ್ಕಾರ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ತೆಗೆಯಬೇಕು: ತೋಂಟದ ಸಿದ್ಧಲಿಂಗ ಶ್ರೀ

ಗದಗ: ಸರ್ಕಾರ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ತೆಗೆಯಬೇಕು. ರಾಧಾಕೃಷ್ಣನ್ ರಾಷ್ಟ್ರಪತಿ, ಬ್ರಾಹ್ಮಣ ಆಗಿದ್ದು, ಹೆಚ್ಚಿನ ಪ್ರಾಧಾನ್ಯತೆ ಇರಲಿ. ಆದರೆ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾ ಪುಲೆ ನೆನಪಿರಲಿ ಎಂದು ಹೇಳಿಕೆ ನೀಡಿದ್ದಾರೆ.

ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾವಿತ್ರಿಬಾ ಪುಲೆ ಅವರು ನಿಂದೆ, ಅಪಮಾನ, ಹಿಂಸೆಗೊಳಗಾಗಿದ್ದಳು. ಮನುವಾದಿಗಳು ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಕೊಂದವ ಮತಾಂಧರು ಆಗಿನ ಕಾಲದಲ್ಲೂ ಸಾವಿತ್ರಿಬಾ ಪುಲೆಗೆ ಸಾಕಷ್ಟು ತೊಂದರೆ ಕೊಟ್ಟಿದ್ದರು. ಆದರೆ ಇವತ್ತು ವಿಶ್ವವಿದ್ಯಾಲಯಕ್ಕೆ ಸಾವಿತ್ರಿ ಬಾ ಅವರ ಹೆಸರೇ ಇಡಲಾಗಿದೆ. ಯಾರು ಅವತ್ತು ಅವರನ್ನು ಅವಮಾನಿಸಿದ ಮನುವಾದಿಗಳ ಜನಾಂಗದ ಈಗಿನ ಮುಖ್ಯಸ್ಥನಾದ ಸಿಎಂ ಫಡ್ನವೀಸ್ ಈಗ ವಿವಿಗೆ ಸಾವಿತ್ರಿ ಬಾ ಪುಲೆ ಅವರ ಹೆಸರನ್ನು ಇಟ್ಟಿದ್ದಾರೆ ಎಂದರು.

ಎಲ್ಲ ತೊಂದರೆ ಸಹಿಸಿಕೊಂಡ ಸಾವಿತ್ರಿ ಬಾ ಪುಲೆ ದೇಶದ ಮೊದಲ ಶಿಕ್ಷಕಿಯಾಗಿದ್ದಾಳೆ. ಭಾರತ ಸರ್ಕಾರ ಸಾವಿತ್ರಿ ಬಾ ಪುಲೆ ಹಾಗೂ ಜ್ಯೋತಿ ಬಾಪುಲೆ ಅವರಿಗೆ ಭಾರತ ರತ್ನ ನೀಡಬೇಕು. ಸಾವಿತ್ರಿಬಾ ಗೆ ಮರಣೋತ್ತರ ಭಾರತ ರತ್ನ ನೀಡಬೇಕು. ಈ ಮೂಲಕ ಕೇಂದ್ರ ಸರ್ಕಾರ ತನ್ನ ಮೇಲಿನ ಕಳಂಕ ತೊಳೆದುಕೊಳ್ಳಬೇಕು. ಜನಪರ, ಶೋಷಿತರ ಪರ, ತುಳಿತಕ್ಕೊಳಗಾದವರ ಪರ ಅನ್ನೋದು ಕೇಂದ್ರ ಸರ್ಕಾರ ತೋರಿಸಿಕೊಡಬೇಕು ಎಂದು ತೋಂಟದ ಸಿದ್ಧಲಿಂಗ ಶ್ರೀ ಆಗ್ರಹಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *