ಕಂಠಪೂರ್ತಿ ಕುಡಿದು ಕಚೇರಿಯಲ್ಲೇ ರಂಪಾಟ ನಡೆಸಿದ ಸರ್ಕಾರಿ ನೌಕರ

ನೆಲಮಂಗಲ: ನಗರದ ಹೊರವಲಯ ನೆಲಮಂಗಲ ಪಟ್ಟಣ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕಂಠ ಪೂರ್ತಿ ಕುಡಿದು ಬಂದ ಸರ್ಕಾರಿ ನೌಕರನೊಬ್ಬ ಮದ್ಯದ ಅಮಲಿನಲ್ಲಿ ಮತ್ತೊಬ್ಬ ನೌಕರನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಸುರೇಶ್ ಎಂಬವರ ವಿರುದ್ಧವೇ ಕುಡಿದು ಬಂದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸುರೇಶ್ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಕ್ಷುಲಕ ವಿಚಾರಕ್ಕೆ ಮತೊಬ್ಬ ನೌಕರ ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸುರೇಶ್ ಗೆ ಕೆಲಸ ನಿರ್ವಹಿಸಲು ಸೂಚಿಸಿದಾಗ, ನನಗೆ ಕೆಲಸ ಹೇಳಲು ನೀನು ಯಾರು? ನನಗೆ ನನ್ನ ಅಧಿಕಾರಿಗಳೇ ಕೆಲಸ ಮಾಡಲು ಹೇಳಲ್ಲ. ನನಗೆ ನೀನು ಕೆಲಸ ಹೇಳುತ್ತೀಯ ಎಂದು ಗಲಾಟೆ ಮಾಡಿದ್ದಾರೆ. ಇಷ್ಟಲ್ಲದೇ ಉಮೇಶ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.

ಘಟನೆ ವೇಳೆ ಕಚೇರಿಯ ಉನ್ನತ ಅಧಿಕಾರಿಗಳು ಮಾತನಾಡುವ ಗೋಜಿಗೆ ಬರಲಿಲ್ಲ ಎನ್ನಲಾಗಿದೆ. ನಂತರ ನೆಲಮಂಗಲ ಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ದಾವಿಸಿ ಕುಡುಕನಿಗೆ ವಾರ್ನ್ ಮಾಡಿ ಕಳುಹಿಸಿದ್ದಾರೆ. ಇನ್ನೂ ಕುಡಿತದ ಮತ್ತಿನಲ್ಲಿದ ನೌಕರ ಸುರೇಶ್ ಮಾಧ್ಯಮಗಳ ಮುಂದೆ ನಾನು ಕುಡಿದಿಲ್ಲ, ಸುಮ್ಮನೆ ಮಾತನಾಡಿಸಲು ಬಂದಿದ್ದೆ ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುವ ಪ್ರಯತ್ನವನ್ನು ನಡೆಸಿದ್ದಾನೆ.

Comments

Leave a Reply

Your email address will not be published. Required fields are marked *