ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಅಂತ್ಯಸಂಸ್ಕಾರದಲ್ಲಿ ಯಾವುದೇ ವಿಧಿವಿಧಾನಗಳನ್ನು ಅನುಸರಿಸದೇ ಮಣ್ಣು ಮಾಡಲಾಗಿತ್ತು. ಆದರೆ ಗೌರಿ ಲಂಕೇಶ್ ಅವರು ಮೃತಪಟ್ಟು ಐದನೇ ದಿನದದಂದು ಸಂಪ್ರದಾಯಿಕ ಪೂಜೆ ನಡೆದಿದೆ.
ಭಾನುವಾರ ಸಂಜೆ ಐದನೇ ದಿನವಾದ ತಿಥಿಯಂದು ಗೌರಿಲಂಕೇಶ್ ಸಮಾಧಿಗೆ ವೀರಶೈವ ಸಂಪ್ರದಾಯದಂತೆ ಪೂಜೆ ನಡೆದಿದೆ. ಬಾಳೆ ಕಂಬ ಕಟ್ಟಿ ಹೊಂಬಾಳೆಯನ್ನು ಇಟ್ಟು ಕುಟುಂಬದ ಸದಸ್ಯರು ಪೂಜಿಸಿದ್ದಾರೆ.
ಗೌರಿ ಲಂಕೇಶ್ ಸಮಾಧಿಗೆ ಎಡೆಯಿಟ್ಟು ಸಂಪ್ರದಾಯಿಕವಾಗಿ ನಡೆದ ಪೂಜೆಯಲ್ಲಿ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು ಎಂದು ಈ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರತ್ಯಕ್ಷದರ್ಶಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಗೌರಿ ಲಂಕೇಶ್ ಧಾರ್ಮಿಕ ವಿಧಿವಿಧಾನಗಳ ನಂಬದೇ ಇದ್ದ ಕಾರಣ ಅಂತ್ಯಸಂಸ್ಕಾರದ ವೇಳೆ ವೀರಶೈವ ಸಂಪ್ರದಾಯವನ್ನು ಅನುಸರಿಸದೇ ಪಾರ್ಥಿವ ಶರೀರವನ್ನು ಚಾಮರಾಜಪೇಟೆಯಲ್ಲಿರುವ ರುದ್ರಭೂಮಿ ಟಿಬಿ ಮಿಲ್ ನಲ್ಲಿ ಬುಧವಾರ ಸಂಜೆ ಮಣ್ಣು ಮಾಡಲಾಗಿತ್ತು.
https://youtu.be/RPYzt-kGunE
https://youtu.be/Bxrj6mm088o



Leave a Reply