ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ- ರಾಜ್ಯದ ರೈತರ ಪಾಲಿಗೆ ಸಂತೋಷದ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ನಾಲ್ಕು ವರ್ಷದ ಬರಗಾಲಕ್ಕೆ ಈ ಬಾರಿ ಅಂತ್ಯ ಕಾಣಲಿದೆ. ಅಲ್ಲದೇ ರಾಜ್ಯದ ರೈತರ ಪಾಲಿಗೆ ಸಂತೋಷದ ಸುದ್ದಿ ನೀಡಿದೆ.

ರಾಜಕ್ಕೆ ಜೂನ್ ತಿಂಗಳಲ್ಲಿ ಶೇಕಡಾ 25 ರಷ್ಟು ಮಳೆ ಹೆಚ್ಚಾಗಿದೆ. ನಾಲ್ಕು ವರ್ಷದಿಂದ ಮಳೆಯ ಕೊರತೆಯನ್ನು ಅನುಭವಿಸಿದ್ದ ರಾಜ್ಯ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜೂನ್ ನಲ್ಲಿ ವಾಡಿಕೆಯಂತೆ 162.4 ಮೀಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 202.3 ಮೀಲಿ ಮೀಟರ್ ಮಳೆಯಾಗಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಕೊರತೆಯಾಗಿದೆ. 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, 14 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಹೀಗಾಗಿ ರಾಜ್ಯದ ಹಲವು ಡ್ಯಾಂ ಗಳಿಗೆ ಜೀವ ಕಳೆ ತುಂಬಿದೆ.

ಡ್ಯಾಂ ನಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನೂ ಮಳೆ ರಾಜ್ಯದಲ್ಲಿ ಸಾಕಷ್ಟು ಅನಾಹುತ ಕೂಡ ಸೃಷ್ಟಿ ಮಾಡಿದ್ದು, ಮಳೆ ಸೃಷ್ಟಿಸಿದ ಅನಾಹುತದಿಂದಾಗಿ 119 ಜನರು ಸಾವನ್ನಪ್ಪಿದ್ದಾರೆ. ಈ ಭಾರಿ ಮುಂಗಾರು ಮಳೆ ಮುಂದಿನ ದಿನಗಳಲ್ಲಿ ಕೂಡ ಉತ್ತಮ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸದ್ಯ ರಾಜ್ಯದ ಎಲ್ಲಾ ಡ್ಯಾಂ ಗಳು ತುಂಬುವ ನೀರಿಕ್ಷೆಗಳಿವೆ.

Comments

Leave a Reply

Your email address will not be published. Required fields are marked *