ಕಾಂಗ್ರೆಸ್ ಪರ ಮತ ಕೇಳಿದ ಬಿಜೆಪಿ ಅಭ್ಯರ್ಥಿ ಸಾಹುಕಾರ್

ಬೆಳಗಾವಿ: ಚುನಾವಣಾ ಪ್ರಚಾರದಲ್ಲಿ ಸಂದರ್ಭದಲ್ಲಿ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಪರ ಮತಯಾಚಿಸುವ ಬದಲು ಬಾಯಿ ತಪ್ಪಿ ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಹೇಳಿದ ಪ್ರಸಂಗ ನಡೆಯಿತು.

ನಾವು ಕಾಂಗ್ರೆಸ್ ಪಕ್ಷ ಬಿಡದೇ ಇದ್ದರೆ ರಾಜಕೀಯವಾಗಿ ನಾವು ನಿರ್ನಾಮವಾಗುತ್ತಿದ್ದೆವು. ಮೊದಲಿಂದಲೂ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು. ಹೀಗಾಗಿ ಪದೇ, ಪದೇ ಕಾಂಗ್ರೆಸ್ ಅಂತ ಬಾಯಿ ತಪ್ಪಿ ಬಂತು. ಕಾಕಾ ನನಗೆ ಬಿಜೆಪಿ ಅಂತ ಹೇಳಿದ್ದು ಒಳ್ಳೆಯದಾಯಿತು. ಆ ಪಕ್ಷಕ್ಕಾಗಿ ನಾನು ಬಹಳ ದುಡಿದಿದ್ದೇನೆ. ಆದರೆ ಆ ಪಕ್ಷದಿಂದ ನನಗೆ ಅನ್ಯಾಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕರ್ತರ ಪ್ರಚಾರ ವೈಖರಿ ಕಂಡು ಖುಷಿ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ, ನಾನು ಯಾವುದೇ ಕಾರಣಕ್ಕೂ ಕಾಂಗ್ರೇಸ್ ಪಕ್ಷ ಬಿಡುವ ಪ್ರಶ್ನೆಯೇ ಇರಲಿಲ್ಲ. ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇರಲಿಲ್ಲ ಎಂದು ಮಾತೃ ಪಕ್ಷವನ್ನು ಇದೇ ವೇಳೆ ಸಾಹುಕಾರ್ ನೆನಪಿಸಿಕೊಂಡರು.

ನಾನು ಕಾಂಗ್ರೆಸ್ ಪಕ್ಷ ಬಿಟ್ಟ ಕಾರಣವನ್ನು ನಾನು ಹೇಳುವುದಕ್ಕಿಂತಲೂ, ಟಿವಿ ಮಾಧ್ಯಮಗಳಲ್ಲಿ ನೀವೆಲ್ಲ ನೋಡಿ ತಿಳಿದುಕೊಂಡಿದ್ದೀರಿ. ನನಗೂ ಸಹ ದುಃಖವಾಗುತ್ತಿದೆ. ಆದರೆ ರಾಜಕೀಯವಾಗಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *