ಶುಭಮನ್ ಗಿಲ್ ನೋಡಿ ಕೆಲ ಹುಡುಗರು ಅಸೂಯೆ ಪಡ್ತಾರೆ: ದಿನೇಶ್ ಕಾರ್ತಿಕ್

ಕೋಲ್ಕತ್ತಾ: ಕೆಕೆಆರ್ ಹಾಗೂ ಟೀಂ ಇಂಡಿಯಾ ಅಂಡರ್ 19 ತಂಡದ ಆಟಗಾರನಾಗಿರುವ ಶುಭಮನ್ ಗಿಲ್ ಸುತ್ತ ಹುಡುಗಿಯರು ಕಾಣಿಸಿಕೊಂಡ ವೇಳೆ ಇತರೇ ಹುಡುಗರು ಅಸೂಯೆ ಪಡುತ್ತಾರೆ ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಕಾಲೆಳೆದಿದ್ದಾರೆ.

ಐಪಿಎಲ್ ಚೊಚ್ಚಲ ಪಂದ್ಯಕ್ಕೆ ತಂಡದ ಪರ ಶುಭಮನ್ ಗಿಲ್ ಅವರಿಗೆ ದಿನೇಶ್ ಕಾರ್ತಿಕ್ ಸ್ವಾಗತ ಕೋರಿ ಮಾತನಾಡಿದರು. ಪಂದ್ಯಕ್ಕೂ ಮುನ್ನ ನಡೆದ ಮಾತುಕತೆಯಲ್ಲಿ ಇಬ್ಬರ ನಡುವೆ ಈ ಚರ್ಚೆ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಪಂದ್ಯವಾಡಿದ ಗಿಲ್ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.

ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗಿಲ್ ಆಕರ್ಷಕ ಅರ್ಧಶತಕ ಗಳಿಸಿದ್ದರು. ಕೇವಲ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಮೂಲಕ ಅಂಡರ್ 19 ವಿಶ್ವಕಪ್ ನಲ್ಲಿ ತೋರಿದ ಪ್ರದರ್ಶನವನ್ನು ಐಪಿಎಲ್‍ನಲ್ಲೂ ಮುಂದುವರೆಸಿದರು.

Comments

Leave a Reply

Your email address will not be published. Required fields are marked *