ಕೆಲಸಕ್ಕೆ ಹೋಗುವಾಗ ರೈಲಿನಿಂದ ಬಿದ್ದು ಯುವತಿ ಸಾವು

ಮುಂಬೈ: ಕೆಲಸಕ್ಕೆ ಹೋಗುವಾಗ ರೈಲಿನಿಂದ ಬಿದ್ದು ಯುವತಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಚಾರ್ಮಿ ಪ್ರಸಾದ್ (22) ಮೃತಪಟ್ಟ ಯುವತಿ. ಚಾರ್ಮಿ ಕಲ್ಯಾಣನಿಂದ ಛತ್ರಪತಿ ಶಿವಾಜಿ ಟರ್ಮಿನಲ್‍ಗೆ ಹೋಗಲು 8.53ಗೆ ರೈಲು ಹತ್ತಿದ್ದರು. ಈ ವೇಳೆ ರೈಲಿನಲ್ಲಿ ಹೆಚ್ಚು ಜನವಿದ್ದರು. ಅಲ್ಲದೆ ಚಾರ್ಮಿಗೆ ಬೋಗಿಯೊಳಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಆಕೆ ಗೇಟ್ ಬಳಿ ನಿಂತು ಪ್ರಯಾಣಿಸುತ್ತಿದ್ದಳು.

ಈ ವೇಳೆ ಏಕಾಏಕಿ ಆಕೆ ರೈಲಿನಿಂದ ಕೆಳಗೆ ಬಿದ್ದಳು. ಪರಿಣಾಮ ಚಾರ್ಮಿ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಗೆ ಹೋದ ತಕ್ಷಣ ಚಾರ್ಮಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಚಾರ್ಮಿ ಘಾಟ್ಕೋಪರ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಚಾರ್ಮಿ ಮೊದಲು ಮಧ್ಯಾಹ್ನದ ಶಿಫ್ಟ್ ಗೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಸೋಮವಾರದಿಂದ ಅವರು ಬೆಳಗ್ಗಿನ ಶಿಫ್ಟ್ ಗೆ ಕೆಲಸಕ್ಕೆ ಹೋಗುತ್ತಿದ್ದರು. ಚಾರ್ಮಿ ಅವರ ಸಾವಿಗೆ ಅಕ್ಕಪಕ್ಕದ ಮನೆಯವರು ಸಂತಾಪ ಸೂಷಿಸಿದ್ದಾರೆ. ಅಲ್ಲದೆ ರೈಲುಗಳನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ.

ಡೊಂಬಿವಾಲಿ ರೈಲ್ವೆ ಅಧಿಕಾರಿ ಸತೀಶ್ ಪವಾರ್ ಪ್ರತಿಕ್ರಿಯಿಸಿ, ಈ ಘಟನೆ ಸೋಮವಾರ ಬೆಳಗ್ಗೆ ಕೇಂದ್ರ ರೈಲ್ವೆ ಉಪನಗರ ಮಾರ್ಗದಲ್ಲಿ ನಡೆದಿದೆ. ರೈಲಿನಿಂದ ಕೆಳಗ್ಗೆ ಬಿದ್ದ ಪರಿಣಾಮ ಯುವತಿಯ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿದ್ದಾಳೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *