ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಬಲಿ

ತುಮಕೂರು: ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.

ಸಿತಾರ(21) ಪಟಾಕಿಗೆ ಬಲಿಯಾದ ಯುವತಿ. ಸಿತಾರ ತುರುವೇಕೆರೆ ತಾಲೂಕಿನ ಅಮ್ಮ ಸಂದ್ರದ ಹಡವನಹಳ್ಳಿ ಗ್ರಾಮದವಳಾಗಿದ್ದು, ಜಿಲ್ಲೆಯ ತಿಪಟೂರು ನಗರದಲ್ಲಿ ಈ ದುರಂತ ಸಂಭವಿಸಿದೆ. ಪ್ರತಿ ವರ್ಷ ತಿಪಟೂರು ಗಣೇಶ ಉತ್ಸವ ನಡೆಯುತ್ತದೆ.

ಭಾನುವಾರ ರಾತ್ರಿ ಗಣೇಶ ಉತ್ಸವ ನೋಡಲು ಸಿತಾರ ಹೋಗಿದ್ದಾಗ ಅಲ್ಲಿ ಪಟಾಕಿ ಹೊಡೆಯುತ್ತಿದ್ದರು. ಪಟಾಕಿ ಹೊಡೆಯುವ ವೇಳೆ ಸಿತಾರ ತಲೆ ಮೇಲೆ ಸರಪಟಾಕಿ ಬಿದ್ದಿದೆ. ಹೆಚ್ಚಿನ ಚಿಕಿತ್ಸೆ ಬೆಂಗಳೂರಿಗೆ ತೆರಳುವಾಗ ಸಿತಾರ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *