ದಾಹ ತಣಿಸಿಕೊಳ್ಳಲು ಹೋಗಿ ನೀರೆಂದು ವಿಷ ಕುಡಿದು ಬಾಲಕಿ ಸಾವು

ಯಾದಗಿರಿ: ನೀರಿನ ದಾಹ ತಣಿಸಿಕೊಳ್ಳಲು ನೀರೆಂದು ವಿಷ ಸೇವಿಸಿ ಬಾಲಕಿ ಸಾವನಪ್ಪಿರುವ ಘಟನೆಯು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಂಗಡಗಿ ಗ್ರಾಮದಲ್ಲಿ ನಡೆದಿದೆ.

16 ವರ್ಷದ ಗೂಡುಮಾ ಮೃತ ದುರ್ದೈವಿ. ನೀರಿನ ದಾಹ ತಣಿಸಿಕೊಳ್ಳಲು ಗೂಡುಮಾ ನೀರಿನ ಬಾಟಲಿಯಿಂದ ಸಹಜವಾಗಿ ಕುಡಿದಿದ್ದಾಳೆ. ಆದರೆ ಪೋಷಕರು ಮನೆಯಲ್ಲಿ ನೀರಿನ ಬಾಟಲಿಯಲ್ಲಿ ಕ್ರಿಮಿನಾಶಕ ಇಟ್ಟಿರುವ ಅರಿವಿಲ್ಲದೆ ನೀರೆಂದು ವಿಷ ಸೇವಿಸಿ ಸಾವನಪ್ಪಿದ್ದಾಳೆ.

ಪೋಷಕರು ಮಾಡಿದ ಎಡವಟ್ಟಿನಿಂದ ಮಗಳು ಸಾವಿನಪ್ಪಿದ್ದಾಳೆ. ಘಟನೆ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *