ಪ್ರೇಮಿಗಳ ದಿನವೇ ಬೀದಿಗೆ ಬಂತು ಲವ್ ದೋಖಾ ವಾರ್..!

ತುಮಕೂರು: ಇಂದು ಪ್ರೇಮಿಗಳ ದಿನಾಚರಣೆ. ಎಲ್ಲಾ ಪ್ರೇಮಿಗಳು ನನಗೆ ನೀನು, ನಿನಗೆ ನಾನು ಎಂದು ಪ್ರೇಮಲೋಕದಲ್ಲಿ ತೇಲುತ್ತಿದ್ದರೆ, ಇಲ್ಲೊಂದು ಪ್ರೇಮಿಗಳ ಜಗಳ ಬೀದಿಗೆ ಬಂದಿದೆ.

ತುಮಕೂರು ನಗರದ ನಿವಾಸಿಗಳಾದ ನೇತ್ರಾವತಿ ಹಾಗೂ ರಂಗನಾಥ್‍ರ ಪ್ರೇಮ ಪ್ರಸಂಗ ಈಗ ಮಹಿಳಾ ಠಾಣಾ ಮೆಟ್ಟಿಲೇರಿದೆ. ರಂಗನಾಥ್ ಮತ್ತು ನೇತ್ರಾ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲದೆ ಇದ್ದುದರಿಂದ ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದರು.

ಆದರೂ ನೇತ್ರಾವತಿ ಕೆಲ ತಿಂಗಳ ಬಳಿಕ ರಂಗನಾಥನ್ ನನ್ನು ಸಂಪರ್ಕಿಸಿ ಮತ್ತೆ ಅನೈತಿಕ ಸಂಬಂಧ ಮುಂದುವರಿಸಿದ್ದಾಳೆ. ನನ್ನ ಬಳಿಯಿಂದ ಸುಮಾರು 1.5 ಲಕ್ಷ ರೂ. ಪೀಕಿದ್ದಾಳೆ. ಬಳಿಕ ದುಡ್ಡು ವಾಪಸ್ ಕೊಡು ಎಂದು ಕೇಳಿದಾಗ ಆಕೆ ನಿರಾಕರಿಸಿದ್ದಾಳೆ ಎಂದು ರಂಗನಾಥ್ ಆರೋಪಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ.

ಕೆಲ ಫೋಟೋ ಇಟ್ಟುಕೊಂಡು ರಂಗನಾಥ್ ತನ್ನನ್ನು ಬ್ಲಾಕ್‍ಮೇಲ್ ಮಾಡುತ್ತಾನೆ ಎಂದು ನೇತ್ರಾವತಿ ದೂರು ನೀಡಿದ್ದಾಳೆ. ಅಸಲಿಗೆ ಈ ಇಬ್ಬರೂ ವಿವಾಹಿತ ಪ್ರೇಮಿಗಳು ಪರಸ್ಪರ ತಮ್ಮ ಖಾಸಗಿ ಫೋಟೋಗಳನ್ನು ಮೊಬೈಲಲ್ಲಿ ಸೆರೆ ಹಿಡಿದು ಒಬ್ಬರಿಗೊಬ್ಬರು ಬ್ಲಾಕ್‍ಮೇಲ್ ಮಾಡಿಕೊಂಡಿದ್ದಾರೆ.

ಇಬ್ಬರು ಪ್ರೇಮಿಗಳ ಜಗಳ ಮಹಿಳಾ ಠಾಣೆಯ ಮೆಟ್ಟಿಲೇರಿದ್ದು ಅಶ್ಲೀಲ ಫೋಟೋಗಳು ವೈರಲ್ ಆಗಿವೆ. ಆದರೆ ಈ ಪ್ರಕರಣದ ಕುರಿತು ಪ್ರಿಯಕರ ರಂಗನಾಥ್ ಪ್ರತಿಕ್ರಿಯೆ ನೀಡಿದರೆ, ನೇತ್ರಾವತಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *