ಚರಂಡಿ ನಂತ್ರ ಹಿರೇಹಳ್ಳದಲ್ಲಿ ತಾವೇ ಇಳಿದು ಸ್ವಚ್ಛತೆಗೆ ಮುಂದಾದ ಗವಿ ಸಿದ್ದೇಶ್ವರ ಶ್ರೀ

ಕೊಪ್ಪಳ: ಕಳೆದ ಜಾತ್ರೆಯ ಸಮಯದಲ್ಲಿ ಚರಂಡಿಯನ್ನು ತಾವೇ ಕ್ಲೀನ್ ಮಾಡಿ ತಮ್ಮ ಸರಳತೆ ಮೆರೆದಿದ್ದ ಗವಿ ಸಿದ್ದೇಶ್ವರ ಶ್ರೀಗಳು ಇದೀಗ ಹಿರೇಹಳ್ಳದಲ್ಲಿ ತಾವೇ ಇಳಿದು ಸ್ವಚ್ಛತೆಗೆ ಮುಂದಾಗಿದ್ದಾರೆ.

ಕೊಪ್ಪಳ ತಾಲೂಕಿನ ದದೇಗಲ್ ಬಳಿ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ರಮಕ್ಕೆ ಕಳೆದ ಮಾರ್ಚ್ 1ರಂದು ಚಾಲನೆ ನೀಡಲಾಗಿದೆ. ಸುಮಾರು 25 ಕಿಲೋ ಮೀಟರ್ ಹಿರೇಹಳ್ಳವನ್ನು ಪುನಶ್ಚೇತನ ಮಾಡಲು ಶ್ರೀಗಳು ಸಂಕಲ್ಪ ಮಾಡಿದ್ದಾರೆ.

ಅದರ ನಿಮಿತ್ಯ ಹಿರೇಹಳ್ಳದ ಮುಳ್ಳು ಕಂಟಿಗಳು ಬೆಳೆದ ಜಾಗದಲ್ಲಿ ಶ್ರೀಗಳು ಜನ ಸಾಮಾನ್ಯರಂತೆ ಕೆಲಸ ಮಾಡೋದು ಮೊಬೈಲಿನಲ್ಲಿ ಸೆರೆಯಾಗಿದೆ. ಹಳ್ಳದಲ್ಲಿ ತಾವೇ ಜನರೊಂದಿಗೆ ಇಳಿದು ಕಸವನ್ನು ಕಿತ್ತು ಹಾಕಿದ್ದಾರೆ. ಗವಿ ಮಠದ ಪೀಠಾಧಿಪತಿ ಆದರೂ ನಾನು ಓರ್ವ ಸಾಮಾನ್ಯ ಎಂದುಕೊಂಡು ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಕೆಲಸ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *