ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಓರ್ವ ಪೊಲೀಸ್ ವಶಕ್ಕೆ

ಬೆಂಗಳೂರು: ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಜಾಡು ಹಿಡಿದು ಚಿಕ್ಕಮಗಳೂರಿಗೆ ಹೋದ ಪೊಲೀಸ್ ತಂಡ ಶಂಕಿತ ಸಂದೀಪ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಿರಂತರ ಬೆಂಗಳೂರಿನ ನಂಟು ಹೊಂದಿದ್ದ ಸಂದೀಪ್, ಫೇಸ್ ಬುಕ್ ನಲ್ಲಿ ಹಲವು ಬಾರು ಗೌರಿಲಂಕೇಶ್ ವಿರೋಧಿಸಿ ಕಾಮೆಂಟ್ ಹಾಕಿದ್ದನು. ಎರಡು ತಿಂಗಳ ಹಿಂದೆ ಬೆಂಗಳೂರಲ್ಲಿ ಮೊಬೈಲ್ ಕಳೆದುಕೊಂಡಿದ್ದನು. ಆ ಮೊಬೈಲ್ ಬೆಂಗಳೂರಿನ ಓರ್ವನಿಗೆ ಸಿಕಿತ್ತು. ಆತನೊಂದಿಗೆ ಸಂದೀಪ್ ನಿರಂತರ ಸಂಪರ್ಕದಲ್ಲಿದ್ದನು. ಆ ಬಳಿಕ 15 ದಿನಗಳ ಹಿಂದೆಯಷ್ಟೇ ಸಂದೀಪ್ ಬೆಂಗಳೂರಿಗೆ ಬಂದು ಹೋಗಿದ್ದನು. ಈ ಜಾಡು ಹಿಡಿದು ಸಿಸಿಬಿ ಪೊಲೀಸರು ಇದೀಗ ಶಂಕಿತ ಸಂದೀಪನ ವಿಚಾರಣೆ ನಡೆಸುತ್ತಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

ಮಂಗಳವಾರ ರಾತ್ರಿ ಸುಮಾರು 7.30 ರ ಸುಮಾರಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಸದ್ಯ ಗೌರಿ ಲಂಕೇಶ್ ಅವರ ಮೃತದೇಹವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಗೌರಿ ಮನೆಯ ಹಾಗೂ ಸ್ಥಳಿಯ ಸಿಸಿಟಿವಿ ಒಟ್ಟು 33 ಸಿಸಿಟಿವಿಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆಗಂತುಕರು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದ್ದು, ಬೇರೆ ಬೇರೆ ಕಡೆ ತನಿಖಾ ತಂಡ ತೆರಳಿದೆ.

 

Comments

Leave a Reply

Your email address will not be published. Required fields are marked *