ರಾಹುಲ್ ಗಾಂಧಿಯನ್ನೇ ಸಿಎಂ ತನಿಖೆಯ ಮುಖ್ಯಸ್ಥರನ್ನಾಗಿ ಮಾಡಲಿ: ಸಿಟಿ ರವಿ

ಚಿಕ್ಕಮಗಳೂರು: ನಮ್ಮ ಪುಣ್ಯ, ಮನೆಯಲ್ಲಿ ಮಕ್ಕಳಾದ್ರೆ ಅದಕ್ಕೆ ಆರ್‍ಎಸ್‍ಎಸ್ ಕಾರಣ ಎಂದು ಹೇಳಿಲ್ಲ. ಕಾಂಗ್ರೆಸ್ಸಿನವರಿಗೆ ಆರ್‍ಎಸ್‍ಎಸ್ ದೂಷಿಸುವುದು ಚಾಳಿಯಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆಗೆ ಆರ್‍ಎಸ್‍ಎಸ್ ಕಾರಣ ಎಂದು ಹೇಳಿರೋ ರಾಹುಲ್ ಹೇಳಿಕೆಯನ್ನ ಖಂಡಿಸಿ ಸಿಎಂ ಸಿದ್ದರಾಮಯ್ಯ ರಾಹುಲ್‍ಗಾಂಧಿ ಅವರನ್ನೇ ತನಿಖೆಯ ಮುಖ್ಯಸ್ಥರನ್ನಾಗಿ ಮಾಡಲಿ. ಆಗ ರಾಹುಲ್ ಗಾಂಧಿಯೇ ಜೇಮ್ಸ್ ಬಾಂಡ್ ರೀತಿಯಲ್ಲಿ ಆರೋಪಿಗಳನ್ನ ಪತ್ತೆ ಹಚ್ಚಿ ಹಿಡಿದುಕೊಂಡು ಬರ್ತಾರೆ ಎಂದು ಹೇಳಿದರು.

ರಾಹುಲ್ ಗಾಂಧಿಗೆ ಎಲ್ಲಿ, ಏನು ನಡೆಯುತ್ತೆ ಅನ್ನೋದನ್ನ ತಿಳಿದುಕೊಳ್ಳೋ ಸಾಮರ್ಥ್ಯವಿದೆ. ಅವರನ್ನ ತನಿಖಾ ದಳದ ಮುಖ್ಯಸ್ಥರನ್ನಾಗಸಿದರೆ ಎಂಎಂ ಕಲಬುರುಗಿ ಸೇರಿದಂತೆ ಎಲ್ಲಾ ಪ್ರಕರಣವನ್ನ ಪತ್ತೆ ಹಚ್ಚುತ್ತಾರೆ ಎಂದು ವ್ಯಂಗ್ಯವಾಡಿದರು.

Comments

Leave a Reply

Your email address will not be published. Required fields are marked *