ನನಗೂ ಬೆದರಿಕೆ ಕರೆಗಳು ಬರುತ್ತಿವೆ, ನಾನು ಹೆದರಲ್ಲ: ಕುಂ.ವೀರಭದ್ರಪ್ಪ

ರಾಯಚೂರು: ನನಗೂ ಬೆದರಿಕೆ ಕರೆಗಳು ಬರುತ್ತಿದ್ದು ಅದಕ್ಕೆ ನಾನು ಹೆದರುವುದಿಲ್ಲ. ಹೆದರಿ ನಾನು ಯಾರನ್ನೂ ರಕ್ಷಣೆ ಕೇಳಿಲ್ಲ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನು ಎಂದೂ ನಡೆದುಕೊಳ್ಳುವುದಿಲ್ಲ. ಎಡಪಂಥಿಯ ವಿಚಾರಧಾರೆಯೇ ಗೌರಿ ಲಂಕೇಶ್ ಹತ್ಯೆಗೆ ಕಾರಣ. ಪ್ರಜಾಸತ್ತಾತ್ಮಕ ವ್ಯವಸ್ಥೆ ದುರ್ಬಲಗೊಳಿಸುವ ಮುನ್ಸೂಚನೆಯಿದು ಎಂದು ಹೇಳಿದರು.

ರಾಜಕಾರಣಿಗಳು, ಸಾಕ್ಷಿ ಮಹಾರಾಜ್ ರಂತ ಸಂತರು ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಹಿಂಸಾತ್ಮಕ ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಇಂಥ ಕೊಲೆಗಳಿಗೆ ಪ್ರಚೋದಕ ಹೇಳಿಕೆಗಳೆ ಕಾರಣವಾಗುತ್ತಿವೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಬೇಗ ಮುಗಿಯಲಿ. ಒಂದು ಹತ್ಯೆ ಇನ್ನೊಂದು ಹತ್ಯೆಗೆ ದಾರಿ ಮಾಡಿಕೊಡಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಚುನಾವಣೆ ಬಳಿಕವೂ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಗಿಮಿಕ್ ಇಲ್ಲ. ಶೋಷಿತ ಒಕ್ಕೂಟಗಳ ಸಮುದಾಯವೇ ಲಿಂಗಾಯತ ಸಮಾಜ. ವೀರಶೈವ ಹಾಗೂ ಲಿಂಗಾಯತ ಬೇರೆ ಬೇರೆ. ವೀರಶೈವದಲ್ಲಿ ಪಾದ ಪೂಜೆ, ಸತ್ತವರ ತಲೆ ಮೇಲೆ ಕಾಲಿಡುವ ಪದ್ದತಿಗಳಿವೆ. ಇದು ಸ್ಥಾವರದ ಸಂಕೇತ. ವೀರಶೈವ ಸ್ಥಗಿತವಾದ ಧರ್ಮ ಹೀಗಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಬೇಕು ಎಂದು ಅವರು ಆಗ್ರಹಿಸಿದರು.

https://youtu.be/9HkIMBshyw8

https://www.youtube.com/watch?v=xUHQ0QzTWJo

https://www.youtube.com/watch?v=5W9fExnZhM4

https://www.youtube.com/watch?v=9i4m_pe6Ir4

https://www.youtube.com/watch?v=JatNCXlFzmo

https://www.youtube.com/watch?v=E-2vEpV_WFE

 

Comments

Leave a Reply

Your email address will not be published. Required fields are marked *