ಬೆಂಗ್ಳೂರಲ್ಲಿ ಯುವಕನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ- ಗೆಳೆಯನ ಮಾತು ಕೇಳಿ ಅಟ್ಯಾಕ್!

ಬೆಂಗಳೂರು: ಹಾಡಹಗಲೇ ಯವಕನ ಮೇಲೆ ಗ್ಯಾಂಗ್ ಒಂದು ಲಾಂಗ್- ಮಚ್ಚುಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ಆಡುಗೋಡಿ ನಿವಾಸಿ ಮನೋಜ್ ಹಲ್ಲೆಗೊಳಗಾದ ಯುವಕನಾಗಿದ್ದು, ಈತನ ಮೇಲೆ ಕಾರ್ತಿಕ್ ಮತ್ತು ಪ್ರದೀಪ್ ಗ್ಯಾಂಗ್ ಹಲ್ಲೆ ನಡೆಸಿದೆ. ಪ್ರಕರಣ ಸಂಬಂಧ ಆಡುಗೋಡಿ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ತಿಕ್ ಗೆಳೆಯ ಸೂರ್ಯ ಎಂಬಾತನ ತಂದೆ ಕಣ್ಣನ್ ಕೆಲದಿನಗಳ ಹಿಂದೆ ಸಾವನ್ನಪ್ಪಿದ್ರು. ತಂದೆ ಹೃದಯಾಘಾತಕ್ಕೆ ಮನೋಜ್ ಕಾರಣ ಎಂದು ಕಾರ್ತಿಕ್ ಬಳಿ ಸೂರ್ಯ ಹೇಳಿಕೊಂಡಿದ್ದನಂತೆ. ಹೀಗಾಗಿ ಸೂರ್ಯನ ಮಾತು ಕೇಳಿ ಗ್ಯಾಂಗ್, ಮನೋಜ್ ಮೇಲೆ ಹಲ್ಲೆ ಮಾಡಿದೆ.

ಸದ್ಯ ಗಾಯಗೊಂಡಿರುವ ಮನೋಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *