ನರಗುಂದದಲ್ಲಿ ಮತ್ತೆ ಭೂಕುಸಿತ – 15 ಅಡಿ ಆಳದಲ್ಲಿ ಸಿಲುಕಿ ನರಳಾಡಿದ ಎತ್ತು

ಗದಗ: ರೈತರೊಬ್ಬರ ಮನೆ ಮುಂದಿನ ರಸ್ತೆ ಪಕ್ಕದಲ್ಲಿ ಎತ್ತು ಕಟ್ಟಿದ್ದ ಸ್ಥಳದಲ್ಲಿಯೇ ಭೂಕುಸಿತ ಸಂಭವಿಸಿ, 15 ಅಡಿ ಆಳದಲ್ಲಿ ಎತ್ತು ಸಿಲುಕಿಕೊಂಡು ಒದ್ದಾಗಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ದಂಡಾಪೂರ ಮಸೀದಿ ಬಳಿ ನಡೆದಿದೆ.

ನರಗುಂದ ನಿವಾಸಿ ಸಿದ್ದಪ್ಪ ಕುರಿ ಅವರಗೆ ಸೇರಿದ ಎತ್ತು ಭೂಕುಸಿತದಲ್ಲಿ ಸಿಲುಕಿಕೊಂಡಿತ್ತು. ಸುಮಾರು 15 ಅಡಿಯ ಆಳದವರೆಗೂ ಮಣ್ಣು ಕುಸಿದಿದ್ದು, ಎತ್ತು ಗುಂಡಿಯಲ್ಲಿ ಸಿಲುಕಿಕೊಂಡು ನರಳಾಡಿದೆ. ಎತ್ತು ಕೂಗುತ್ತಿದ್ದ ಶಬ್ಧ ಕೇಳಿ ಹೊರಗೆ ಬಂದ ರೈತ, ಭೂಕುಸಿತ ನೋಡಿ ದಿಗ್ಭ್ರಾಂತರಾಗಿದ್ದಾರೆ. ನಂತರ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸ್ಥಳಿಯರು ಭೂಕುಸಿತದ ಗುಂಡಿಯಲ್ಲಿ ಸಿಲುಕಿದ್ದ ಎತ್ತನ್ನು ಮೇಲೆಕ್ಕೆ ಕರೆತರಲು ಹರಸಾಹಸ ಪಟ್ಟಿದ್ದಾರೆ.

ಘಟನೆ ನಡೆದ ಒಂದು ಗಂಟೆ ನಂತರ ಜೆಸಿಬಿ ಬಳಸಿಕೊಂಡು ಎತ್ತನ್ನು ರಕ್ಷಣೆ ಮಾಡಲಾಯಿತು. ಸ್ಥಳೀಯರು, ಅಗ್ನಿಶಾಮಕದಳ ಸಿಬ್ಬಂದಿ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಕಾರ್ಯಾಚರಣೆ ನಡೆಸಿ ಎತ್ತನ್ನು ರಕ್ಷಣೆ ಮಾಡಿದರು. ನರಗುಂದ ಪಟ್ಟಣದಲ್ಲಿ ಪದೇ ಪದೇ ಭೂಕುಸಿತವಾಗುತ್ತಿದ್ದು, ಸ್ಥಳೀಯರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.

Comments

Leave a Reply

Your email address will not be published. Required fields are marked *