ಬಿತ್ತನೆಗೆ ತೊಗರಿ ಖರೀದಿಸಲು ಹಣ ಜಮೆ ಮಾಡಿ- ಸರ್ಕಾರಕ್ಕೆ ರೈತರ ಆಗ್ರಹ

ಗದಗ: ತೊಗರಿ ಕಣಜ ಅಂತಾ ಖ್ಯಾತಿ ಪಡೆದಿರುವ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ರೈತರು ತೊಗರಿ ಬೆಳೆಯುತ್ತಾರೆ.

ತೊಗರಿ ಬೆಳೆಗಾರರಿಗೆ ಸೂಕ್ತ ಬೆಲೆ ಕೊಡ್ತಿವಿ ಅಂತಾ ಸರ್ಕಾರ, ಸ್ವಸಹಾಯ ಸಂಘಗಳಿಂದ ಲಕ್ಷಾಂತರ ರೈತರ ತೊಗರಿ ಖರೀದಿಸಿತ್ತು. ಹೀಗೆ ಖರೀದಿಸಿದ ತೊಗರಿ ಹಣ ರೈತರ ಖಾತೆಗೆ ಹಾಕುವುದಾಗಿ ಹೇಳಿ 6 ತಿಂಗಳಾದ್ರು ಹಣ ಮಾತ್ರ ಜಮೆಯಾಗಿಲ್ಲ.

80 ಸಾವಿರ ರೈತರ 500 ಕೋಟಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದೀಗ ಮತ್ತೆ ಮುಂಗಾರು ಆರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜಕ್ಕೂ ಹಣವಿಲ್ಲ. ಹೀಗಾಗಿ ಇದೀಗ ಮತ್ತೆ ಅನಿವಾರ್ಯವಾಗಿ ಖಾಸಗಿಯವರ ಬಳಿ ಸಾಲ ಸೂಲ ಮಾಡಿ ಬಿತ್ತನೆ ಬೀಜ ಖರೀದಿಸುವ ಪರಿಸ್ಥಿತಿ ಎದುರಾಗಿದೆ.

ಆದ್ದರಿಂದ ಸರ್ಕಾರ ಕೂಡಲೇ ತೊಗರಿ ಖರೀದಿ ಹಣ ಜಮೆ ಮಾಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *