ಔಷಧಿ ಸೇವಿಸಲು ಬಿಸಿ ನೀರಿಗಾಗಿ 2 ಗಂಟೆ ಪರದಾಡಿದ ಮಾಜಿ ಪ್ರಧಾನಿ!

ಬೆಳಗಾವಿ: ದೇಶದ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಕುಡಿಯಲು ಒಂದು ಗ್ಲಾಸ್ ಬಿಸಿನೀರು ಸಿಗದೆ ಪರದಾಡಿದ ಘಟನೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಪಕ್ಷ ಸಂಘಟನೆಗಾಗಿ ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿರುವ ಮಾಜಿ ಪ್ರಧಾನಿ ಔಷಧಿ ತಗೆದುಕೊಳ್ಳಲು ಪ್ರವಾಸಿ ಮಂದಿರದ ಸಿಬ್ಬಂದಿಯಲ್ಲಿ ಬಿಸಿನೀರು ಕೇಳಿದರೆ ಅವರು ನೀರು ಕೊಡಲು ನಿರಾಕರಿಸಿದರು. ಸುಮಾರು 2 ಗಂಟೆಗಳ ಕಾಲ ಮಾಜಿ ಪ್ರಧಾನಿ ಬಿಸಿ ನೀರಿಗಾಗಿ ಕಾದು ಕುಳಿತಿದ್ದರು.

ಕೊನೆಗೆ ಕಾರ್ಯಕರ್ತರೊಬ್ಬರ ಮನೆಯಿಂದ ಬಿಸಿನೀರು ತಂದು ಎಚ್ ಡಿಡಿ ಔಷಧಿ ಸೇವಿಸಿದ್ರು. ಈ ಘಟನೆಯಿಂದ ಸ್ಥಳದಲ್ಲಿದ್ದ ಎಂ ಎಲ್ ಸಿ ಶರವಣ ಗರಂ ಆಗಿ ಪ್ರವಾಸಿ ಮಂದಿರದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ.

ಐಬಿ ಕ್ಯಾಂಟೀನ್ ಮುಚ್ಚಿ 1 ತಿಂಗಳು ಆಗಿತ್ತು. ಹೀಗಾಗಿ ನೀರಿನ ವ್ಯವಸ್ಥೆಗಾಗಿ ಮಾಜಿ ಪ್ರಧಾನಿ ಪರದಾಡುವ ಸ್ಥಿತಿ ಬಂದಿತ್ತು.

 

 

Comments

Leave a Reply

Your email address will not be published. Required fields are marked *