ಬಡವರಿಗೆ ದೊಡ್ಡ ಆಸ್ತಿಯನ್ನ ಕಳೆದುಕೊಂಡತಾಗಿದೆ: ಉಮಾಶ್ರೀ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ಅಗಲಿಕೆಯಿಂದ ಬಡವರಿಗೆ ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಸಂತಾಪ ಸೂಚಿಸಿದ್ದಾರೆ.

ಶಿವಳ್ಳಿ ಅವರ ಪಾರ್ಥಿವ ಶರೀರದ ದರ್ಶನ ಪಡೆ ಬಳಿಕ ಮಾಧ್ಯಮಗಳ ಜೊತೆ ಮಾಡನಾಡಿದ ಉಮಾಶ್ರೀ, ಪೌರಾಡಳಿತ ಸಚಿವ ಶಿವಳ್ಳಿ ಅವರು ಬಹುದೊಡ್ಡ ಸಾಧನೆಯನ್ನು ಮಾಡಿ ಇಂತಹ ದೊಡ್ಡ ಪದವಿಯನ್ನು ಹೊಂದಿದ್ದರು. ಶಿವಳ್ಳಿ ಅವರು ಗ್ರಾಮೀಣ ಭಾಗದಿಂದ ಬಂದ ಅಪ್ಪಟ ಗ್ರಾಮೀಣ ಸೊಗಡಾಗಿದ್ದರು. ಇವರು ಕಲೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಜನಪದ ಸೊಗಡು ಮತ್ತು ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಿದ್ದರು ಎಂದು ಹೇಳಿದರು.

ಶಿವಳ್ಳಿ ಅವರು ತುಂಬಾ ಕಷ್ಟ ಮತ್ತು ಬಡತನದಿಂದ ಬಂದಂತಹ ಬಹುದೊಡ್ಡ ಪ್ರತಿಭೆ. ನನ್ನ ಬಗ್ಗೆಯೂ ಅವರು ತುಂಬಾ ಪ್ರೀತಿ ಮತ್ತು ಗೌರವವನ್ನು ಇಟ್ಟುಕೊಂಡಿದ್ದರು. ಅವರು ನನ್ನನ್ನು ಅಕ್ಕಾ ಎಂದು ಕರೆಯುತ್ತಿದ್ದರು. ಇವತ್ತು ಶಿವಳ್ಳಿ ಅವರನ್ನು ಕಳೆದುಕೊಂಡಿದ್ದು, ಬಡವರಿಗೆ ದೊಡ್ಡ ಆಸ್ತಿಯನ್ನ ಕಳೆದುಕೊಂಡತೆ ಆಗಿದೆ ಎಂದು ಹೇಳುತ್ತಾ ಭಾವುಕರಾದರು.

ಶಿವಳ್ಳಿ ಅವರು ಬಡವರ ಮೇಲೆ ತುಂಬಾ ಗೌರವ ಇಟ್ಟುಕೊಂಡಂತವರು. ಅವರನ್ನು ಕಳೆದುಕೊಂಡಿದ್ದರಿಂದ ನಮ್ಮ ಪಕ್ಷಕ್ಕೆ ತುಂಬಾ ಹಾನಿಯಾಗಿದೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಜೊತೆಗೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಉಮಾಶ್ರೀ ಹೇಳಿದರು.

Comments

Leave a Reply

Your email address will not be published. Required fields are marked *