ಆಗೋದೆಲ್ಲ ಒಳ್ಳೇದಕ್ಕೆ, ಸಚಿವ ಸ್ಥಾನ ತಪ್ಪಿದ್ದೂ ಒಳ್ಳೆಯದಕ್ಕೆ ಅನ್ನಿಸುತ್ತೆ – ರಾಮಲಿಂಗಾ ರೆಡ್ಡಿ

ಬೆಂಗಳೂರು: ನಾನು ಸಚಿವ ಸ್ಥಾನಬೇಕು ಎಂದು ಯಾರನ್ನು ಕೇಳಿಲ್ಲ. ಅರ್ಹತೆ ಇದ್ರೆ ಕೊಡಲಿ. ನಾವು ಅಧಿಕಾರದ ಹಿಂದೆ ಹೋಗಬಾರದು. ಅಧಿಕಾರ ನಮ್ಮನ್ನ ಹುಡುಕಿಕೊಂಡು ಬರಬೇಕು. ಆಗೋದೆಲ್ಲ ಒಳ್ಳೆಯದಕ್ಕೆ ಎಂಬ ಹಾಗೇ ಸಚಿವ ಸ್ಥಾನ ತಪ್ಪಿದ್ದು ಒಳ್ಳೆಯದಕ್ಕೆ ಎಂದನಿಸುತ್ತಿದೆ ಅಂತ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಜಯನಗರದ ವಿಧಾನಸಭಾ ಫಲಿತಾಂಶದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಪಕ್ಷಗಳು ಗೆಲ್ಲಲು ಅಭ್ಯರ್ಥಿ ಕಣ್ಣಕ್ಕೆ ಇಳಿಸುತ್ತಾರೆ. ನಮ್ಮ ಪಕ್ಷ, ಪುತ್ರಿ ಸೌಮ್ಯರಿಗೆ ಸ್ಥಾನ ನೀಡಿತ್ತು. ಎಲ್ಲರ ಶ್ರಮದಿಂದ ಗೆಲುವು ಸಿಕ್ಕಿದೆ. ಗೆಲುವಿಗೆ ಸಹಕಾರ ನೀಡಿದ ಜೆಡಿಎಸ್ ಅಭ್ಯರ್ಥಿ ಹಾಗೂ ಪಕ್ಷಕ್ಕೆ ಧನ್ಯವಾದ ಅಂದ್ರು.

ಸದ್ಯ ಪಕ್ಷಕ್ಕೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದೇನೆ. ನಮ್ಮದೆ ಸಮ್ಮಿಶ್ರ ಸರ್ಕಾರ ಇದೆ. ಬೆಂಗಳೂರು ಅಭಿವೃದ್ಧಿ ಮಾಡುವ ಕುರಿತು ಮುಂದಿನ ಗುರಿ ಇದೆ. ಹಿಂದೆ ನಾನು ಈ ಕ್ಷೇತ್ರದಲ್ಲಿ ಜಯಿಸಿದ್ದೆ. ಎಲ್ಲರ ಸಂಪರ್ಕ ಇತ್ತು. ಅನೇಕರು ಪಕ್ಷಕ್ಕೆ ಬಂದು ಗೆಲುವಿಗಾಗಿ ಶ್ರಮವಹಿಸಿದ್ದಾರೆ. ಜನ ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

ತಮ್ಮ ಪುತ್ರಿ ರಾಜಕೀಯಕ್ಕೆ ಬರುವುದು ಬೇಡ ಎಂದು ಹೇಳಿದ್ದೆ. ಆದರೆ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇತ್ತು. ರಾಜಕೀಯಕ್ಕೆ ಬಂದರೆ ಹೆಚ್ಚು ಕೆಲಸ ಮಾಡಬಹುದು ಎಂದು ಬಂದಿದ್ದಾರೆ. ತಂದೆಯಾಗಿ ಎಲ್ಲರಂತೆ ತಮಗೂ ಖುಷಿಯಾಗಿದೆ ಎಂದರು.

Comments

Leave a Reply

Your email address will not be published. Required fields are marked *