ನೀವು ಬಿಟ್ಟರೂ ನಾನು ಮಾತ್ರ ಬಿಡಲ್ಲ-ಶ್ರೀರಾಮುಲು ಗೆಲ್ಲಿಸಿಕೊಂಡು ಬರ್ತೀನಿ ಅಂತಾ ಹೈಕಮಾಂಡ್‍ಗೆ ರೆಡ್ಡಿ ಸಂದೇಶ

ಚಿತ್ರದುರ್ಗ: ನೀವು ಬಿಟ್ಟರೂ ನಾನು ಮಾತ್ರ ಬಿಡಲ್ಲ. ಬಹಿರಂಗವಾಗಿ ಬರಲ್ಲ. ಆದ್ರೆ ಒಳಗಡೆಯಿಂದ ಬಿಡಲ್ಲ ಅನ್ನೋ ಮಂತ್ರವನ್ನು ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳಗ ಜಪಿಸುತ್ತಿದೆ. ಕಾಂಗ್ರೆಸ್ ಪಕ್ಷ ರೆಡ್ಡಿಯನ್ನು ಟಾರ್ಗೆಟ್ ಮಾಡಿದ್ದ ಬೆನ್ನಲ್ಲೇ, ಅಮಿತ್ ಶಾ ಅಬ್ಬರದ ಪ್ರಚಾರಕ್ಕೆ ಬ್ರೇಕ್ ಹಾಕಿಕೊಳ್ಳುವಂತೆ ತಾಕೀತು ಮಾಡಿದ್ರು.

ಹೈಕಮಾಂಡ್ ಆದೇಶಕ್ಕೆ ಓಕೆ ಅಂದಿರುವ ಜನಾರ್ದನ ರೆಡ್ಡಿ, ಸಂಸದ ಶ್ರೀರಾಮುಲು ಮೂಲಕ ಹೈಕಮಾಂಡ್‍ಗೆ ಮತ್ತೊಂದು ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಭಾನುವಾರ ಮತ್ತೆ ಮೊಳಕಾಲ್ಮೂರಿಗೆ ಶಿಫ್ಟ್ ಆಗಿರುವ ಜನಾರ್ದನ ರೆಡ್ಡಿ, ನಾನು ಬಹಿರಂಗವಾಗಿ ಅಖಾಡಕ್ಕೆ ಇಳಿಯಲ್ಲ, ಆದ್ರೆ ಒಳಗೆ ಕೆಲಸ ಮಾಡ್ತೀನಿ. 10 ರಿಂದ 12 ಸೀಟುಗಳನ್ನು ಬಿಜೆಪಿಗೆ ಗೆಲ್ಲಿಸಿ ಕೊಡೋದು ನನ್ನ ಜವಾಬ್ದಾರಿ ಎಂದು ಮಾತು ಕೊಟ್ಟಿದ್ದಾರಂತೆ.

ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ರಾಯಚೂರಿನಲ್ಲಿ ನಮ್ಮದೇ ಹವಾ. ನನ್ನ ಮೊದಲ ಟಾರ್ಗೆಟ್ ಸಿಎಂ ಸಿದ್ದರಾಮಯ್ಯ, ಅವ್ರನ್ನ ಬದಾಮಿಯಲ್ಲಿ ಸೋಲಿಸಿ, ಶ್ರೀರಾಮುಲು ಗೆಲ್ಲಿಸಿಕೊಂಡು ಬರ್ತೀನಿ ಅಂತಾ ರೆಡ್ಡಿ ಬಿಜೆಪಿ ಹೈಕಮಾಂಡ್‍ಗೆ ಸಂದೇಶ ಕಳುಹಿಸಿದ್ದು, ಅಲ್ಲಿಂದಲೂ ಅನುಮತಿ ದೊರತಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *