ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ

ಚಿಕ್ಕೋಡಿ: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಮಠಾಧೀಶರ ಪೇಟದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮಠಾಧೀಶರ ಕ್ಷಮೆ ಕೇಳಬೇಕು ಎಂದು ಇಂಚಿಗೇರಿ ಶಾಖಾ ಮಠದ ಅಭಿನವ ಮಂಜುನಾಥ ಶ್ರೀ ಆಗ್ರಹಿಸಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿರುವ ಇಂಚಿಗೇರಿ ಶಾಖಾಮಠದಲ್ಲಿ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿರುವ ಶ್ರೀಗಳು, ಮಠಾಧೀಶರ ಪೇಟದ ಬಗ್ಗೆ ಪ್ರಶ್ನೆ ಹಾಕಿರುವುದನ್ನು ವಿರೋಧಿಸುತ್ತೇವೆ. ಮಠಾಧೀಶರ ಬಗ್ಗೆ ಅಸಹ್ಯ ಹಾಗೂ ಅಪಾಹಾಸ್ಯ ಮಾಡಿದ್ದು ಖಂಡನೀಯ. ಸ್ಚಾಮೀಜಿಗಳ ಪೇಟ ನಾಡನ್ನ ಕಾಪಾಡುವ ಶಸ್ತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

ಮಠಾಧೀಶರ ಮೇಲೆ ಕ್ಷುಲ್ಲಕ ವಿಷಯ ತಂದು ಪರಂಪರೆಗೆ ಧಕ್ಕೆ ತರುವ ಕಾರ್ಯ ಮಾಡಬಾರದು. ಅಪಹಾಸ್ಯವಾಗಿ ನುಡಿದಿರುವದನ್ನ ವಿರೋಧ ಮಾಡುತ್ತೇವೆ. ಎಲ್ಲ ಮಠಾಧೀಶರ ಒಕ್ಕೂಟ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಲು ಸಜ್ಜಾಗಿದ್ದೇವೆ. ವಿವಾದಕ್ಕೆ ತೆರೆ ಎಳೆಯಬೇಕಾದರೇ ತಕ್ಷಣವೇ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದರು.

Comments

Leave a Reply

Your email address will not be published. Required fields are marked *