ಹೆಲಿಕಾಪ್ಟರ್‌ನಲ್ಲಿ ತಂದು ಕೊಡ್ತಿದ್ದ ಆಹಾರವನ್ನು ಸಂತ್ರಸ್ತರಿಗೆ ತಲುಪಿಸಿದ್ರು

ಕಾರವಾರ: ಪ್ರವಾಹ ಪರಿಹಾರ ಕಾರ್ಯದಲ್ಲಿ ಪಬ್ಲಿಕ್ ಟಿವಿಯೂ ಕೈ ಜೋಡಿಸಿದ್ದು, ನಮ್ಮ ನೆಚ್ಚಿನ ವೀಕ್ಷಕರೂ ಸಂತ್ರಸ್ತರಿಗೆ ಅನ್ನಾಹಾರ, ಔಷಧಿಯನ್ನ ವಿತರಿಸುತ್ತಿದ್ದಾರೆ. ಕಾರವಾರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ತಂದು ಹಾಕೋ ಸಾಮಾಗ್ರಿಗಳನ್ನ ಪಬ್ಲಿಕ್ ಟಿವಿ ಅಭಿಮಾನಿಗಳು ಸಂತ್ರಸ್ತರಿಗೆ ತಲುಪಿಸಿದ್ದಾರೆ.

ಹೆಲಿಕಾಪ್ಟರ್ ಮೂಲಕ ಸಂತ್ರಸ್ತರಿಗೆ ಆಹಾರ, ಅಗತ್ಯ ವಸ್ತುಗಳನ್ನು ತಲುಪಿಸಲಾಗುತ್ತಿದೆ. ಹೀಗೆ ಉತ್ತರ ಕನ್ನಡದಲ್ಲಿ ಪ್ರವಾಹಕ್ಕೆ ರೋಸಿಹೋಗಿರುವ ಸಂತ್ರಸ್ತರಿಗೂ ಕೂಡ ಆಹಾರವನ್ನು ತಲುಪಿಸಲಾಯಿತು. ಈ ವೇಳೆ ಪಬ್ಲಿಕ್ ಟಿವಿ ಅಭಿಮಾನಿಗಳು ಆ ಆಹಾರದ ಬಾಕ್ಸ್ ಗಳನ್ನು ಹೆಲಿಕಾಪ್ಟರ್ ನಿಂದ ಇಳಿಸಿಕೊಂಡು ಸಂತ್ರಸ್ತರಿಗೆ ತಾವೇ ತಲುಪಿಸಿದ್ದಾರೆ. ಈ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.

ಒಂದೆಡೆ ಪ್ರವಾಹಕ್ಕೆ ತತ್ತರಿಸಿರುವ ಜನರು, ಇನ್ನೊಂದೆಡೆ ಎನ್‍ಡಿಆರ್‍ಎಫ್ ಸಿಬ್ಬಂದಿ ತಮ್ಮ ಪ್ರಾಣ ಪಣಕ್ಕಿಟ್ಟು ಅಪಾಯದಲ್ಲಿ ಸಿಲುಕ್ಕಿದ್ದವರ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಪ್ರವಾಹ ಸಂತ್ರಸ್ತರ ನೆರವಿಗೆ ಕರ್ನಾಟಕದ ಜನತೆ ನಿಂತಿದ್ದಾರೆ. ಪಬ್ಲಿಕ್ ಟಿವಿ ಜೊತೆ ಕೈಜೋಡಿಸಿ ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.

Comments

Leave a Reply

Your email address will not be published. Required fields are marked *