ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಭಾರತೀಯ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

ಅಬುಧಾಬಿ: ಮಾರ್ಗ ಮಧ್ಯದಲ್ಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಕ್ಕೆ ನವದೆಹಲಿಯಿಂದ ಮಿಲನ್‍ಗೆ ಹೊರಟಿದ್ದ ವಿಮಾನ ಯುನೈಟೆಡ್ ಆರಬ್ ಎಮಿರೇಟ್ಸ್ (UAE) ನಲ್ಲಿ ಲ್ಯಾಂಡ್ ಆಗಿದೆ.

ಇಟಲಿಯಲ್ಲಿ ನೆಲೆಸಿದ್ದ ಭಾರತದ ರಾಜಸ್ಥಾನ ಮೂಲದ ಕೈಲಾಶ್ ಚಂದ್ರ ಸೈನಿ (52) ಮೃತಪಟ್ಟ ವ್ಯಕ್ತಿ. ಕೈಲಾಶ್ ತನ್ನ 26 ವರ್ಷದ ಮಗ ಹೀರಾ ಲಾಲ್ ಸೈನಿಯೊಂದಿಗೆ ನವದೆಹಲಿಯಿಂದ ಮಿಲನ್‍ಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಕೂಡಲೇ ಅಬುಧಾಬಿಯಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿ ಅವರನ್ನು ಅಲ್ಲಿಯ ಮಾಫ್ರಾಕ್ ಎಂಬ ಅಸ್ಪತ್ರೆಗೆ ಸೇರಿಸಲಾಗಿತ್ತು. ಕೈಲಾಶ್ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ವೈದೈರು ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಸಿರುವ ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೌನ್ಸಿಲರ್ ಎಂ. ರಾಜಮುರುಗನ್ ಅವರು, ಮಂಗಳವಾರ ಸೈನಿ ಅವರ ಮರಣೋತ್ತರ ಪರೀಕ್ಷೆ ನಡೆಸಿ ಮರಣ ಪ್ರಮಾಣ ಪತ್ರವನ್ನು ಯುಎಇ ಸರ್ಕಾರ ನೀಡಿದೆ. ಎತಿಹಾಡ್ ವಿಮಾನದ ಮೂಲಕ ಮೃತದೇಹ ಇಂದು ಭಾರತಕ್ಕೆ ಬರಲಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *