ನಿಮ್ಮಲ್ಲಿ ಏನಾಗ್ತಿದೆ ಅದನ್ನು ಗಮನಿಸಿ, ನಮ್ ಪಕ್ಷದ ವಿಚಾರ ನಿಮಗ್ಯಾಕೆ: ಬಿಎಸ್‍ವೈಗೆ ಪರಂ ತಿರುಗೇಟು

ಬೆಂಗಳೂರು: ನಮ್ಮ ವಿಚಾರದಲ್ಲಿ ಅವರು ಗಮನ ಕೊಡುವುದು ಬೇಡ. ಬಿಜೆಪಿಯಲ್ಲಿ ಏನಾಗ್ತಿದೆ ಎನ್ನುವುದನ್ನು ಮೊದಲು ಗಮನಿಸಲಿ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಬಿಎಸ್ ಯಡಿಯೂರಪ್ಪನವರಿಗೆ ತಿರುಗೇಟು ನೀಡಿದ್ದಾರೆ.

ತನ್ನನ್ನು ಬೆಂಬಲಿಸಿ ಕುಮಾರಸ್ವಾಮಿಯವರ ನಡೆಯನ್ನು ಟೀಕಿಸಿದ್ದ ಬಿಎಸ್‍ವೈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಾನು ಕರೆದ ಕಾರಣ ಈ ಸುದ್ದಿಗೋಷ್ಠಿಯಲ್ಲಿ ನಾನು ಮಾತನಾಡುವುದಿಲ್ಲ ಎಂದು ಮೊದಲೇ ಕುಮಾರಸ್ವಾಮಿಯವರಿಗೆ ತಿಳಿಸಿದ್ದೆ ಎಂದು ಸ್ಪಷ್ಟನೆ ನೀಡಿದರು.

ಸಂಪುಟಕ್ಕೆ ಸೇರಿಸುವಾಗ ಕಳಂಕಿತರೋ, ಆರೋಪಿಗಳೋ ನೋಡುವುದಿಲ್ಲ ಜನರಿಂದ ಆಯ್ಕೆಯಾದ ಯಾರೇ ಆಗಲಿ ನಾವು ಸೇರಿಸುತ್ತೇವೆ ಎಂದರು.

ಪರಮೇಶ್ವರ್ ಅವರನ್ನು ನಿರ್ಲಕ್ಷಿಸಿ ಏಕಾಂಗಿಯಾಗಿ ಸುದ್ದಿಗೋಷ್ಠಿ ನಡೆಸುವ ಮೂಲಕ ಸಿಎಂ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ. ಮಿತ್ರ ಪಕ್ಷದ ಮೇಲೆ ಅವರಿಗೆ ವಿಶ್ವಾಸವಿಲ್ಲವೆಂದು ಇದರಿಂದಲೇ ತಿಳಿಯುತ್ತದೆ. ಹೀಗಿರುವಾಗ ಈ ಅಪವಿತ್ರ ಮೈತ್ರಿ ಸರ್ಕಾರದಿಂದ ಜನತೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿ ಯಡಿಯೂರಪ್ಪ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿ ಎಚ್‍ಡಿಕೆಗೆ ಬಿಎಸ್‍ವೈ ಟಾಂಗ್!

 

Comments

Leave a Reply

Your email address will not be published. Required fields are marked *