ಕೊನೆಗೂ ಭೂಕಂಪ ಆಯ್ತು: ರಾಹುಲ್‍ಗೆ ಮೋದಿ ಟಾಂಗ್

ನವದೆಹಲಿ: ಸೋಮವಾರದಂದು ಉತ್ತರ ಭಾರತದ ಹಲವೆಡೆ ಭೂಕಂಪ ಸಂಭವಿಸಿರುವ ಬೆನ್ನಲ್ಲೇ, ಕೊನೆಗೂ ಭೂಕಂಪ ಆಯ್ತು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.

ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಮೋದಿ, ಕೊನೆಗೂ ಭೂಕಂಪ ಆಯ್ತು. ಭೂಮಿ ತಾಯಿ ಕೋಪಗೊಂಡಿರಬಹುದು ಎಂದರು. ಈ ಹಿಂದೆ ರಾಹುಲ್ ಗಾಂಧಿ, ಮೋದಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ನಾನು ಸಂಸತ್ತಿನಲ್ಲಿ ಮಾತನಾಡಿದ್ರೆ ಭೂಕಂಪವಾಗುತ್ತೆ ಎಂದಿದ್ದರು.

ಭಾರತದ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಮಾತನಾಡಿದ ಮೋದಿ, ಜನ ಶಕ್ತಿಯಿಂದಲೇ ಒಬ್ಬ ಟೀ ಮಾರುವವರ ಮಗ ದೇಶದ ಪ್ರಧಾನಿಯಾಗಿದ್ದು ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

ಮಲ್ಲಿಕಾರ್ಜುನ್ ಖರ್ಗೆ ಅವರ ಟೀಕೆಗೆ ಉತ್ತರಿಸಿ, ನಾವು ನಾಯಿಗಳ ಪರಂಪರೆಯಿಂದ ಬೆಳೆದುಬಂದಿಲ್ಲ ಅಂದ್ರು. ಭಗತ್ ಸಿಂಗ್ ಮತ್ತು ಆಝಾದ್‍ರಂತಹವರು ಕೂಡ ಇದ್ದರು ಅನ್ನೋದನ್ನು ಇವರ ಬಾಯಲ್ಲಿ ಕೇಳೇ ಇಲ್ಲ. ಕೇವಲ ಒಂದು ಪರಿವಾರದಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಅಂದುಕೊಂಡಿದ್ದಾರೆ ಅಂತ ಉತ್ತರಿಸಿದ್ರು.

ಕಾಂಗ್ರೆಸ್‍ನಲ್ಲಿ ಜವಹರ್ ಲಾಲ್ ನೆಹರೂ, ಇಂದಿರಾ ಗಾಂಧಿಯಂತ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ರು. ಆದ್ರೆ ಬಿಜೆಪಿಯಿಂದ ಒಂದು ನಾಯಿ ಕೂಡ ಸತ್ತಿಲ್ಲ ಅಂತ ಖರ್ಗೆ ಹೇಳಿಕೆ ನೀಡಿದ್ದರು.

Comments

Leave a Reply

Your email address will not be published. Required fields are marked *