ದೆಹಲಿಯಲ್ಲಿ ಕನ್ನಡಿಗರ ಕೂಗಿಗೆ ಕಡೆಗೂ ಸಿಕ್ಕಿತು ಪುರಸ್ಕಾರ

ನವದೆಹಲಿ: ದೆಹಲಿಯಲ್ಲಿ ಕನ್ನಡಿಗರ ಕೂಗಿಗೆ ಕಡೆಗೂ ಪುರಸ್ಕಾರ ಸಿಕ್ಕಿದ್ದು, ಮೆಟ್ರೋ ನಿಲ್ದಾಣಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಹೆಸರು ಇಡಲು ಕೇಂದ್ರ ಸರ್ಕಾರ ಮುಂದಾಗಿದೆ.

ದೆಹಲಿ ಕರ್ನಾಟಕ ಸಂಘದ ಮುಂಭಾಗ ಇರುವ ಮೋತಿ ಬಾಗ್ ಮೆಟ್ರೋ ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ಹೆಸರು ಇಡಬೇಕೆಂದು ದೆಹಲಿಯ ಕನ್ನಡಿಗರು ಮನವಿ ಮಾಡಿದ್ದರು. ಈ ಮನವಿಯನ್ನು ಸರ್ಕಾರ ಪುರಸ್ಕರಿಸಿದ್ದು, ಸದ್ಯದಲ್ಲೇ ಮೆಟ್ರೋ ನಿಲ್ದಾಣ ಉದ್ಘಾಟನೆಯಾಗಲಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯವರೆಗೆ ಸಂಚರಿಸವ ಮಧ್ಯೆ ಸಿಗುವ ಸೆಂಟ್ರಲ್ ಕಾಲೇಜ್ ಬಳಿ ಇರುವ ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ನಿಲ್ದಾಣ ಎಂದು ಹೆಸರಿಡಲಾಗಿದೆ.

Comments

Leave a Reply

Your email address will not be published. Required fields are marked *