ಬಿಎಸ್‍ವೈ, ಈಶ್ವರಪ್ಪ ನಡುವಿನ ಶೀತಲ ಸಮರ ಅಂತ್ಯ- ಅಮಿತ್ ಶಾ ನೇತೃತ್ವದ ಸಂಧಾನ ಸಭೆ ಸಕ್ಸಸ್

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಇಬ್ಬರ ನಡುವಿನ ಶೀತಲ ಸಮರಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪೂರ್ಣ ವಿರಾಮ ಹಾಕಿದ್ದಾರೆ. ಕೆಎಸ್ ಈಶ್ವರಪ್ಪ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆಯಲ್ಲಿ ಅಮಿತ್ ಶಾ ಇಬ್ಬರು ನಾಯಕರ ಮನವೊಲಿಸಿದ್ದಾರೆ ಅಂತಾ ಎನ್ನಲಾಗುತ್ತಿದೆ.

ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ಈಶ್ವರಪ್ಪ ಮತ್ತು ಬಿಎಸ್ ಯಡಿಯೂರಪ್ಪ ಕೈ ಎತ್ತಿ ಹಿಡಿದ ಅಮಿತ್ ಶಾ ಇಬ್ಬರೂ ಹೀಗೆ ಒಟ್ಟಾಗಿ ಚುನಾವಣೆಗೆ ಹೋಗ್ತಾರೆ. ಅಲ್ಲದೆ ಯಡಿಯೂರಪ್ಪ ನಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ. ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸ್ತೀವಿ. ಅಲ್ಲದೆ ಈಗ ಏನು ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಅದು ಚುನಾವಣೆ ಘೋಷಣೆ ಬಳಿಕ ಸುನಾಮಿಯಾಗಿ ಭಾರತೀಯ ಜನತಾ ಪಕ್ಷ ಪ್ರಚಂಡ ಬಹುಮತದೊಂದಿಗೆ ಗೆದ್ದು ಸರ್ಕಾರ ರಚಿಸುತ್ತದೆ ಅಂತ ಹೇಳಿದ್ರು.

ಈಶ್ವರಪ್ಪ ಮತ್ತು ಯಡಿಯೂರಪ್ಪರ ನಡುವಿನ ಮುನಿಸಿನ ಬಗ್ಗೆ ಮಾಧ್ಯಮಗಳು ಅಮಿತ್ ಶಾರನ್ನು ಪ್ರಶ್ನೆ ಮಾಡಿದಾಗ, ಮತ್ತೊಮ್ಮೆ ಇಬ್ಬರ ಕೈ ಯನ್ನು ಮೇಲಕ್ಕೆತ್ತಿ ಇದೇ ನನ್ನ ಉತ್ತರ ಅಂತಾ ಅಂದ್ರು.

Comments

Leave a Reply

Your email address will not be published. Required fields are marked *