ಬೆಳಗಾವಿ: ಅಂತರ್ಜಾತಿ ವಿವಾಹವಾಗಿದ್ದಕ್ಕಾಗಿ ತಂದೆಯೋರ್ವ ತನ್ನ 21ರ ಹರೆಯದ ಪುತ್ರಿಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯ ನಿಮ್ಖೆಡಾ ಗ್ರಾಮದಲ್ಲಿ ನಡೆದಿದೆ.
ಮನೀಷಾ ಹಿಂಗನೆ ಕೊಲೆಯಾದ ದುರ್ದೈವಿ. ಬಾಬು ಶಿವಾರೆ ತನ್ನ ಪುತ್ರಿಯನ್ನು ಬುಧವಾರ ಕೊಡಲಿಯಿಂದ ಕೊಚ್ಚಿ ಹತ್ಯಗೈದಿದ್ದಾನೆ. ಮನೀಷಾ ಬೇರೆ ಜಾತಿಗೆ ಸೇರಿದ ಗಣೇಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಆದರೆ ಬಾಬು ಮಗಳ ಮದುವೆಯನ್ನು ಏಪ್ರಿಲ್ 20 ರಂದು ಬೇರೊಬ್ಬ ಯುವಕನೊಂದಿಗೆ ನಿಶ್ಚಯ ಮಾಡಿದ್ದರು.

ಮನೀಷಾ ಮತ್ತು ಗಣೇಶ್ ಮನೆಯಿಂದ ಪರಾರಿಯಾಗಿ ಮಾರ್ಚ್ 23ರಂದು ಮದುವೆಯಾಗಿದ್ದರು. ಕೆಲವು ದಿನಗಳ ಬಳಿಕ ಗ್ರಾಮದಲ್ಲಿ ಎಲ್ಲಾ ಸರಿಯಾಗಿರಬಹುದು ಎಂದು ಭಾವಿಸಿದ ದಂಪತಿ ಗ್ರಾಮಕ್ಕೆ ವಾಪಸಾಗಿದ್ದಾರೆ. ಔಷಧಿಗಳ ಮಾರಾಟ ಪ್ರತಿನಿಧಿಯಾಗಿರುವ ಗಣೇಶ್ ಬುಧವಾರ ಕರ್ತವ್ಯಕ್ಕೆ ತೆರಳಿದ್ದು, ಆತನ ಪೋಷಕರು ಮನೆಯಲ್ಲಿರಲಿಲ್ಲ.

ಈ ವೇಳೆ ಮಗಳ ಮನೆಗೆ ಬಂದ ಬಾಬು ಮಗಳನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಸಂಬಂಧ ಸತಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸಾವಿಗೂ ಮುನ್ನ ಯಾರು ನಿನನ್ನನ್ನ ಯಾರು ಕೊಂದಿದ್ದ, ನಿಮ್ಮ ತಂದೇನಾ ಅಂತಾ ಕೇಳಿದ್ದಕ್ಕೆ ಹೌದು ಅಂತಾ ಯುವತಿ ತಲೆ ಅಲ್ಲಾಡಿಸುವ ದೃಶ್ಯ ಎಲ್ಲರ ಮನಕಲಕುವಂತಿತ್ತು.
https://www.youtube.com/watch?v=gbw1Nt1lMhg


Leave a Reply