ಚೆನ್ನೈ: ಪತ್ನಿ ಜಗಳ ಮಾಡಿದಕ್ಕೆ ಇಬ್ಬರು ಮಕ್ಕಳನ್ನು ತಂದೆಯೇ ಉಸಿರುಗಟ್ಟಿಸಿ ಕೊಂದ ಮನಕಲಕುವ ಘಟನೆ ಗುರುವಾರ ರಾತ್ರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.
ಹೇಮವರ್ಷಿಣಿ (15) ಹಾಗೂ ಶ್ರೀಜಾ (8) ಕೊಲೆಯಾದ ದುರ್ದೈವಿಗಳು. ಸಿಂಗನಲ್ಲೂರು ನಿವಾಸಿ ಪದ್ಮಾನಾಭನ್ ಎಂಬಾತ ಕೊಲೆ ಮಾಡಿರುವ ಪಾಪಿ ತಂದೆ. ಪದ್ಮಾನಾಭನ್ ಹಾಗೂ ಸೆಲ್ವಾರಾಣಿ ಮಧ್ಯೆ ಮನಸ್ತಾಪ ಉಂಟಾಗಿತ್ತು, ಆದರಿಂದ ಯಾವಾಗಲೂ ಅವರಿಬ್ಬರು ಜಗಳವಾಡುತ್ತಲೇ ಇದ್ದರು. ಆದರೆ ಗುರುವಾರ ರಾತ್ರಿಯ ಜಗಳ ತಾರಕಕ್ಕೇರಿದ ಪರಿಣಾಮ ಪತ್ನಿ ಮನೆ ಬಿಟ್ಟು ತನ್ನ ತವರಿಗೆ ಹೋಗಿದ್ದಾಳೆ. ಈ ವೇಳೆ ಪತ್ನಿ ಮೇಲಿನ ಕೋಪಕ್ಕೆ ಪದ್ಮಾನಾಭನ್ ತನ್ನಿಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮರುದಿನ ಸೆಲ್ವಾರಾಣಿ ತನ್ನ ಮಕ್ಕಳು ತನ್ನೊಂಡನೆ ಕರೆದುಕೊಂಡು ಹೊಗಲು ಮನೆಗೆ ಬಂದಾಗ ಮಕ್ಕಳು ಸಾವನ್ನಪ್ಪಿದ್ದನ್ನು ಕಂಡು ಕಂಗಾಲಾಗಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದಾಗ ಮಕ್ಕಳನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಆರೋಪಿ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಸಿಂಗನಲ್ಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply