ರಾತ್ರೋ ರಾತ್ರಿ ಮನೆಗೆ ನುಗ್ಗಿದ ದೈತ್ಯ ಮೊಸಳೆ

ಅಹಮದಾಬಾದ್: ರೈತರೊಬ್ಬರ ಮನೆಗೆ ನುಗ್ಗಿದ್ದ 8 ಅಡಿ ಉದ್ದದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಆನಂದ್ ಜಿಲ್ಲೆಯ ಮಾಲಾತಾಜ್ ಗ್ರಾಮದ ನಿವಾಸಿಯಾಗಿರುವ 30 ವರ್ಷದ ಬಾಬುಭಾಯಿ ಎಂಬವರ ಮನೆಗೆ ಮೊಸಳೆ ನುಗ್ಗಿತ್ತು.

ಆಗಿದ್ದೇನು?
ಬುಧವಾರ ರಾತ್ರಿ ಸುಮಾರು 1.30ಕ್ಕೆ ಬಾಬುಭಾಯಿ ಮನೆಯ ಸುತ್ತಮುತ್ತ ನಾಯಿಗಳು ಬೊಗಳಲು ಶುರುಮಾಡಿವೆ. ತನ್ನ ಮನೆಯ ಸಾಕು ಪ್ರಾಣಿಗಳು ಸಹ ಅತ್ತಿಂದ ಇತ್ತ ಓಡಾಲರಂಭಿಸಿವೆ. ನಿದ್ದೆಯಿಂದ ಎದ್ದ ಬಾಬುಭಾಯಿ ಮಂಚದ ಕೆಳಗೆ ಏನು ಸದ್ದು ಆಗುತ್ತಿದೆ ಎಂದು ಇಣುಕಿ ನೋಡಿದ್ದಾರೆ. ಮಂಚದ ಕೆಳಗೆ ಬರೋಬ್ಬರಿ 8 ಅಡಿ ಉದ್ದದ ಮೊಸಳೆಯನ್ನು ನೋಡಿ ನಿಧಾನವಾಗಿ ಮನೆಯಿಂದ ಹೊರ ಬಂದಿದ್ದಾರೆ.

ಮನೆಯಿಂದ ಹೊರಬಂದ ಬಾಬುಭಾಯಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮದ ಯುವಕರು ಅರಣ್ಯ ಇಲಾಖೆ ಕಚೇರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *