ಜಮೀನು ಅತಿಕ್ರಮಿಸಿ ರಸ್ತೆ ನಿರ್ಮಾಣ- ಬಿಜೆಪಿ ಸಂಸದ ಮುನಿಸ್ವಾಮಿಯಿಂದ ದೌರ್ಜನ್ಯ

ಕೋಲಾರ: ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.

ತಮ್ಮ ಜಮೀನಿಗೆ ಸಂಸದರು ಅಕ್ರಮವಾಗಿ ಪ್ರವೇಶಿಸಿ ರಸ್ತೆ ನಿರ್ಮಿಸಿದ ಆರೋಪದ ಮೇಲೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ರೈತ ರಾಜಗೋಪಾಲ ಗೌಡರು ದೂರು ನೀಡಿದ್ದಾರೆ.

ಜಗದೇನಹಳ್ಳಿಯ ಜಮೀನಿಗೆ ಅಕ್ಟೋಬರ್ 24 ರಂದು ಸಂಸದರು ಮತ್ತು ಅಧಿಕಾರಿಗಳು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮಾಲೂರು ತಹಶೀಲ್ದಾರ್, ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ 27 ಮಂದಿ ವಿರುದ್ಧ ರೈತ ದೂರು ನೀಡಿದ್ದಾರೆ.

ನಲ್ಲಿ ಕೃಷಿ ಜಮೀನಿನಲ್ಲಿ ದಬ್ಬಾಳಿಕೆಯಿಂದ ರಸ್ತೆ ನಿರ್ಮಿಸಿ, ಮರಗಳನ್ನು ನಾಶಗೊಳಿಸಿರುವ ಆರೋಪ ಮಾಡಿದ್ದಾರೆ. ಅಲ್ಲದೆ ಪ್ರಾಣ ಬೆದರಿಕೆ ಒಡ್ಡಿರುವ ಸಂಸದ, ಅಧಿಕಾರಿ ಹಾಗೂ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಎಸ್ಪಿಗೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *