ಹೆಣ್ಮಕ್ಕಳಿರುವ ಮನೆಗೆ ಹೋಗಿ ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದ ಕಾಮುಕನಿಗೆ ಬಿತ್ತು ಗೂಸಾ

ತುಮಕೂರು: ಹೆಣ್ಣು ಮಕ್ಕಳಿರುವ ಮನೆಗೆ ಮಧ್ಯರಾತ್ರಿಯಲ್ಲಿ ಹೋಗಿ ಬಾಗಿಲು ಬಡಿಯುತ್ತಿದ್ದ ಕಾಮುಕನಿಗೆ ಗೂಸಾ ಕೊಟ್ಟಿರುವ ಘಟನೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

ಭೀಮಸಂದ್ರ ಗ್ರಾಮದ ನಿವಾಸಿಯಾದ ಗಿರೀಶ್ ಎಂಬ ಕಾಮುಕ ಎರ್ರಾಬಿರ್ರಿ ಏಟು ತಿಂದ ಮಹಾಶಯ. ಈತ ಕಳೆದ ಮೂರ್ನಾಲ್ಕು ದಿನಗಳಿಂದ ಅದೇ ಗ್ರಾಮದ ಕೆಂಪಣ್ಣ ಎಂಬುವವರ ಮನೆಯ ಬಳಿ ಹೋಗಿ ಬಾಗಿಲು ಬಡಿಯುತ್ತಿದ್ದ. ಈತನ ವಿಕೃತ ಕಾಮ ಚೇಷ್ಟೆ ತಾಳಲಾರದೇ ಅವರ ಕುಟುಂಬದವರೇ ಏಟು ಕೊಟ್ಟಿದ್ದಾರೆ.

ಕೆಂಪಣ್ಣ ಅವರ ಮನೆಗೆ ಮಧ್ಯರಾತ್ರಿ ಹೋಗಿ ಹೊರಗೆ ನಿಂತಿರುವ ಬೈಕ್‍ಗಳಿಗೆ ಕಲ್ಲಿನಿಂದ ಹೊಡೆಯುತ್ತಿದ್ದ. ಅಷ್ಟೇ ಅಲ್ಲದೇ ಮನೆಯಲ್ಲಿರುವ ಹೆಣ್ಣುಮಕ್ಕಳನ್ನು ಕಳಿಸಿಕೊಡು ಅಂತಾ ಅಸಭ್ಯವಾಗಿ ಬಾಯಿಗೆ ಬಂದಂತೆ ಮಾತನಾಡಿದ್ದ. ಇದರಿಂದ ಕೆಂಪಣ್ಣ ಕುಟುಂಬಸ್ಥರು ಆತನ ವಿಕೃತ ಕಾಮಚೇಷ್ಟೆಗೆ ರೋಸಿಹೋಗಿದ್ದರು.

ಇಂದು ಬೆಳಗ್ಗೆ ಕೆಂಪಣ್ಣ ತಮ್ಮ ಮಗಳನ್ನ ಕರೆದುಕೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಅಲ್ಲಿಗೂ ಕೂಡ ಕಾಮುಕ ಗಿರೀಶ್ ಹಿಂಬಾಲಿಸಿಕೊಂಡು ಬಂದಿದ್ದಾನೆ. ಇದರಿಂದ ಕೋಪಗೊಂಡ ಕೆಂಪಣ್ಣ ಸಹೋದರರು ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಸಮೀಪದಲ್ಲಿದ್ದ ತಿಲಕ್ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ.

Comments

Leave a Reply

Your email address will not be published. Required fields are marked *