ಮನೆ ಮಾಲೀಕರ ದುರಾಸೆ – ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬಗಳು

ಬೆಂಗಳೂರು: ಹಣದಾಸೆಗೆ ಬಡಾವಣೆ ಮಾಡಿದ ಮಾಲೀಕರ ದುರುದ್ದೇಶಕ್ಕೆ ನಗರದ ಕುಟುಂಬಗಳು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ.

ಒಂದು ಕಡೆ ರಸ್ತೆಯಲ್ಲಿ ನಿಂತು ಮನೆಕಡೆ ನೋಡಿ ನೋವು ಪಡುತ್ತಿರುವ ಮನೆ ಕಟ್ಟಿದ ಮಾಲೀಕರು. ಇನ್ನೊಂದೆಡೆ ಇತ್ತೀಚೆಗೆ ಮಹಾಮಳೆಗೆ ಜಮೀನು ಮಾಲೀಕರು ಮಾಡಿದ ತಪ್ಪಿನ ದುರುದ್ದೇಶಕ್ಕೆ ಕುಸಿಯುವ ಹಂತದಲ್ಲಿರುವ ಎರಡು ಮನೆಗಳನ್ನು ನೋಡಿ ಸಂಕಟ ಪಟ್ಟುಕೊಳ್ಳುತ್ತಿರುವ ಕುಟುಂಬಗಳು ಒಂದು ಕಡೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮನಬಂದಂತೆ ಕಾರ್ಮಿಕರ ಮೇಲೆ ಗುಂಡಿನ ದಾಳಿ – ಇಬ್ಬರು ಬಲಿ

ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಸೌಂದರ್ಯ ಬಡಾವಣೆಯಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಮನೆಯ ಪಕ್ಕದಲ್ಲಿ ಕಟ್ಟಿದ್ದ ಕಂಪೌಂಡ್ ಕುಸಿದು ಮನೆ ಬೀಳುವ ಹಂತಕ್ಕೆ ತಲುಪಿದೆ. ಕಷ್ಟ ಪಟ್ಟು ಸಾಲಸೋಲ ಮಾಡಿ ಗೂಡು ಕಟ್ಟಿದ್ದ ಕುಟುಂಬ ಇಂದು ಕಣ್ಣೀರಿನಲ್ಲಿ ಜೀವನ ನಡೆಸುವಂತಾಗಿದೆ.

ನಿವೇಶನ ಖರೀದಿ ಮಾಡಿದ ಕುಟುಂಬ ಇಂದು ಅಕ್ಕಪಕ್ಕದ ಮನೆಯಲ್ಲಿ ವಾಸಮಾಡುವ ಸ್ಥಿತಿಗೆ ಬಂದಿದೆ. ಹಣಕ್ಕಾಗಿ ಬಡವರಿಗೆ ಜಮೀನನ್ನ ಸೈಟ್ ಆಗಿ ಪರಿವರ್ತನೆ ಮಾಡಿದ ವ್ಯಕ್ತಿಗಳಾದ ಗುಂಡಪ್ಪ, ನಾಗರಾಜು, ಶ್ರೀನಿವಾಸ್ ಸಂಕಷ್ಟದಲ್ಲಿರುವ ಜನರ ನೆರವಿಗೆ ಬಾರದೇ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಪೋಟ – ಮನೆ ಬೆಂಕಿಗಾಹುತಿ

ಮನೆ ಪಕ್ಕದ ಸೈಟ್ ನಲ್ಲಿ ಮಣ್ಣು ತೆರವು ಮಾಡಿದ ಪರಿಣಾಮ ಇಂದು ನಾವು ನೋವಿನಲ್ಲಿ ಕಾಲ ಕಳೆಯುವಂತೆ ಆಗಿದೆ ಎಂದು ಕುಟುಂಬಗಳು ನೋವು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *