ರಾಯಚೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ- ಕಲಬೆರಕೆ ಸೇಂದಿ ಜಪ್ತಿ

ರಾಯಚೂರು: ನಗರದ ಸಿಯತಲಾಬ್ ಮೇದಾರ್ ಓಣಿಯಲ್ಲಿ ಅಬಕಾರಿ ಪೊಲೀಸರು ದಾಳಿ ನಡೆಸಿ ದೊಡ್ಡ ಪ್ರಮಾಣದ ಸಿ.ಎಚ್ ಪೌಡರ್ ಹಾಗೂ ಸೇಂದಿ ತಯಾರಿಕೆಗೆ ಬಳಸುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ರಾಯಚೂರು ಅಬಕಾರಿ ಡಿಸಿ ಲಕ್ಷ್ಮಿ ನಾಯಕ, ಡಿಎಸ್‍ಪಿ ಹನುಮಂತ ಗುತ್ತೆದಾರ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ವೇಳೆ ಕಲಬೆರಕೆ ಸೇಂದಿ ಸಮೇತ ಆರೋಪಿ ಕಿಶೋಲ್ ಲಾಲ್‍ನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿ ಬಳಿ ಇದ್ದ 32 ಕೆಜಿ ಸಿಎಚ್ ಪೌಡರ್, 4 ಕೆಜಿ ವೈಟ್ ಫೆಸ್ಟ್, 10ಲೀ ಸೇಂದಿ ಸೇರಿ ಕಲಬೆರಿಕೆ ಸೇಂದಿ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಹಾಗೂ ಸಿಎಚ್ ಪೌಡರ್ ಸಾಗಾಟಕ್ಕೆ ಬಳಕೆ ಮಾಡಿದ ಎರಡು ಮೊಪೆಡ್ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ರಾಯಚೂರು ಅಬಕಾರಿ ಉಪ ವಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 3 ದಿನ ಟ್ರಾಫಿಕ್ ಸಮಸ್ಯೆ ತಡ್ಕೊಳ್ಳಿ, 50 ವರ್ಷ ಕುಡಿಯುವ ನೀರಿನ ಸಮಸ್ಯೆ ಇರಲ್ಲ: ಡಿಕೆಶಿ

Comments

Leave a Reply

Your email address will not be published. Required fields are marked *