ಮಾಜಿ ಸಚಿವ ಅಂಬರೀಷ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಸಚಿವ ಹಾಗೂ ನಟ ಅಂಬರೀಷ್ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾದ ಅಂಬರೀಷ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನಾಳೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

ಈ ಬಗ್ಗೆ ವಿಕ್ರಂ ಆಸ್ಪತ್ರೆ ವೈದ್ಯರಾದ ಡಾ. ಸತೀಶ್ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದು, ಮೂರು ವರ್ಷಗಳಿಂದ ರೊಟೀನ್ ಚೆಕಪ್‍ಗೆ ಅಂಬರೀಷ್ ಬರ್ತಿದ್ದಾರೆ. ಇವತ್ತು ಹೆಲ್ತ್ ಚೆಕಪ್‍ಗೆ ಬಂದಿದ್ರು. ರಕ್ತ ಪರೀಕ್ಷೆ ನಡೆಯುತ್ತಿದೆ. ಭಯಪಡುವಂತಹದ್ದು ಏನು ಇಲ್ಲ ಅಂದ್ರು.

ಅಂಬರೀಷ್ ಆರೋಗ್ಯವಾಗಿದ್ದಾರೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಮಾಡುತ್ತೇವೆ. ಅಂಬರೀಷ್ ಖುದ್ದು ಸಂಜೆ ಮನೆಗೆ ಹೋಗ್ತೀನಿ ಅಂದಿದ್ದಾರೆ. ರೊಟೀನ್ ಟೆಸ್ಟ್ ಮುಗಿಸಿಕೊಂಡು ಡಿಸ್ಚಾರ್ಜ್ ಮಾಡಲಿದ್ದೇವೆ ಎಂದು ಡಾ. ಸತೀಶ್ ತಿಳಿಸಿದ್ರು.

Comments

Leave a Reply

Your email address will not be published. Required fields are marked *