ರೈಲಿಗೆ ಸಿಲುಕಿ ಎರಡನೇ ತರಗತಿ ವಿದ್ಯಾರ್ಥಿ ಸಾವು

ತಿರುವನಂತಪುರಂ: ರೈಲಿ(Train) ಗೆ ಸಿಲುಕಿ ಎರಡನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕೇರಳದ ತ್ರಿಶೂರ್ ನಡೆದಿದೆ.

ಬಾಲಕನನ್ನು ಮಹಮ್ಮದ್ ರಿಜ್ವಾನ್ (8) ಎಂದು ಗುರುತಿಸಲಾಗಿದೆ. ಈತ ಕೌಮುಲ್ಲಂಪಾರಂ ನಿವಾಸಿ ಫೈಸಲ್ ಅವರ ಪುತ್ರ. ಇಂದು ಬೆಳಗ್ಗೆ ಮದರಸಾ (Madarasa) ದಿಂದ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಇದನ್ನೂ ಓದಿ: ವೃದ್ಧೆಯನ್ನು ಹತ್ಯೆ ಮಾಡಿ, ಆಕೆಯ ದೇಹವನ್ನ ತುಂಡರಿಸಿ ಗೋಣಿ ಚೀಲದಲ್ಲಿ ಎಸೆದ ಮಗ, ಮೊಮ್ಮಗ

ರಿಜ್ವಾನ್ ಮದರಸಾದಿಂದ ಮನೆಗೆ ಹಿಂದಿರುಗುತ್ತಿದ್ದನು. ಹೀಗೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಎರ್ನಾಕುಲಂ-ಪಾಲಕ್ಕಾಡ್ ಮೆಮು (Ernakulam Palakkad Memu) ಎಕ್ಸ್ ಪ್ರೆಸ್ ರೈಲಿಗೆ ರಿಜ್ವಾನ್ ಸಿಲುಕಿದ್ದು, ಆತನನ್ನು ಸ್ವಲ್ಪ ದೂರ ರೈಲು ಎಳೆದುಕೊಂಡು ಹೋಗಿದೆ. ಪರಿಣಾಮ ರಿಜ್ವಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಥಣಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *