ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್

ಲ್ಲಂಗಡಿ ಮತ್ತು ದಾಳಿಂಬೆಯ ಪಂಚ್ ಹಗುರ, ರಿಫ್ರೆಶಿಂಗ್ ಮತ್ತು ಸರಳವಾದ ಪಾನೀಯವಾಗಿದೆ. ಈ ಹಣ್ಣುಗಳ ಸೇವನೆ ದೇಹವನ್ನು ಹೈಡ್ರೇಟ್ ಆಗಿ ಇರಿಸಲು ಸಹಾಯ ಮಾಡುತ್ತದೆ. ನವರಾತ್ರಿಯ ಸಂದರ್ಭ ಹೆಚ್ಚಿನವರು ವೃತವನ್ನಾಚರಿಸುತ್ತಾರೆ. ಈ ವೇಳೆ ದೇಹದಲ್ಲಿ ನೀರಿನಂಶದ ಕೊರತೆಯಾಗಬಹುದು. ಇದನ್ನು ನೀಗಿಸಲು ನೀವು ಕಲ್ಲಂಗಡಿ, ದಾಳಿಂಬೆಯ ಪಂಚ್ ಖಂಡಿತಾ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:
ಹೆಚ್ಚಿದ ಕಲ್ಲಂಗಡಿ ಹಣ್ಣು – 4 ಕಪ್
ದಾಳಿಂಬೆ ಬೀಜಗಳು – 1 ಕಪ್
ಸಕ್ಕರೆ – ಕಾಲು ಕಪ್
ಪುದೀನಾ – 6-7 ಎಲೆಗಳು
ನಿಂಬೆ ರಸ- 2 ಟೀಸ್ಪೂನ್
ತಣ್ಣಗಿನ ನೀರು – 2 ಕಪ್
ಐಸ್ ಕ್ಯೂಬ್ – 2 ಕಪ್ ಇದನ್ನೂ ಓದಿ: ಇಮ್ಯೂನಿಟಿ ಪವರ್‌ಗಾಗಿ ಸವಿಯಿರಿ ಸೀತಾಫಲ ಸ್ಮೂದಿ

ಮಾಡುವ ವಿಧಾನ:
* ಮೊದಲಿಗೆ ಕಲ್ಲಂಗಡಿ, ದಾಳಿಂಬೆ, ಸಕ್ಕರೆ, ಪುದೀನ ಎಲೆ ಮತ್ತು ನಿಂಬೆ ರಸವನ್ನು ಬ್ಲೆಂಡರ್‌ಗೆ ಹಾಕಿ, 1-2 ನಿಮಿಷಗಳ ಕಾಲ ಅಥವಾ ನಯವಾಗುವ ತನಕ ಬ್ಲೆಂಡ್ ಮಾಡಿ.
* ನಂತರ ಅದಕ್ಕೆ ನೀರನ್ನು ಹಾಕಿ ಮತ್ತೆ ಸ್ವಲ್ಪ ಬ್ಲೆಂಡ್ ಮಾಡಿ.
* ಸ್ಟ್ರೈನರ್‌ಗೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಸೋಸಿಕೊಳ್ಳಿ.
* ಸರ್ವಿಂಗ್ ಗ್ಲಾಸ್‌ಗಳಿಗೆ ರಸವನ್ನು ಸುರಿಯಿರಿ. ಅದಕ್ಕೆ ಐಸ್ ಕ್ಯೂಬ್‌ಗಳನ್ನು ಸೇರಿಸಿ.
* ಇದೀಗ ಕಲ್ಲಂಗಡಿ, ದಾಳಿಂಬೆ ಪಂಚ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮಖಾನಾ ಖೀರ್ ಮಾಡಿ ನೋಡಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]