ಆನೆ ದಂತದ ಆಸೆಗೆ ಬಿದ್ದು ಮೂವರು ಜೈಲು ಪಾಲು

ಹಾಸನ: ಆನೆ ದಂತವನ್ನು ಕದ್ದು ಸಾಗಿಸಲು ಹೋಗಿ ಮೂವರು ಆರೋಪಿಗಳು ಜೈಲು ಸೇರಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್‍ನಲ್ಲಿ ನಡೆದಿದೆ.

ಅಸ್ಸಾಂ ಮೂಲದ ಗುರುಪ್ರಸಾದ್, ಸಿಲಾಸ್ ಬರ್ಲ್ ಮತ್ತು ಉಣಿಲ್ ಆನೆಯನ್ನು ಕೊಂದ ಆರೋಪಿಗಳು. ಆನೆ ದಂತ ಕದ್ದ ಆರೋಪದಲ್ಲಿ ಸಕಲೇಶಪುರ ಆರ್‍ಎಫ್‍ಓ ರವೀಂದ್ರ ನೇತೃತ್ವದ ತಂಡ ಮೂವರನ್ನು ಬಂಧಿಸಿದೆ.

ಆಕಸ್ಮಿಕವಾಗಿ ಸತ್ತ ಆನೆಯಿಂದ ಮೂವರು ಆರೋಪಿಗಳು ದಂತ ಕಿತ್ತಿದ್ದರು. ಅಲ್ಲದೆ ಆನೆಯ ದಂತವನ್ನು ಅಸ್ಸಾಂಗೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದರು. ಮೂವರು ಆರೋಪಿಗಳು ಕಾಡುಮನೆ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದು, ಆನೆ ದಂತ ಕಿತ್ತ ನಂತರ ಆನೆಯನ್ನು ಭೂಮಿಯಲ್ಲಿ ಹೂಳಲು ಯತ್ನಿಸಿದ್ದರು.

ಮೂವರು ಆರೋಪಿಗಳ ನಡೆಯಲ್ಲಿ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ದಂತದ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

Comments

Leave a Reply

Your email address will not be published. Required fields are marked *