ಅನಾಥ ಭೀಮ ಆಗಲಿದ್ದಾನೆ ಅರ್ಜುನನ ಉತ್ತರಾಧಿಕಾರಿ!

ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗಿಯಾಗಿರುವ ಕಿರಿಯ ಆನೆ ಭೀಮ, ಭವಿಷ್ಯದಲ್ಲಿ ಗಜಪಡೆಯ ಕ್ಯಾಪ್ಟನ್ ಆಗಲಿದ್ದಾನೆ. ಒಂದರ್ಥದಲ್ಲಿ ಕ್ಯಾಪ್ಟನ್ ಅರ್ಜುನನಿಗೆ ಉತ್ತರಾಧಿಕಾರಿಯಾಗಿ ಭೀಮನನ್ನು ಬೆಳೆಸಲಾಗುತ್ತಿದೆ.

ಅಂಬಾರಿ ಆನೆಗೆ ಇರಬೇಕಾದ ಅಗಲವಾದ ಬೆನ್ನು, ಎತ್ತರ, ದಂತ, ತೂಕ ಎಲ್ಲವೂ ಭೀಮನಲ್ಲಿ ಕಾಣುತ್ತಿವೆ. 17 ವರ್ಷದ ಭೀಮ ಇನ್ನೂ ಆರೇಳು ವರ್ಷಕ್ಕೆ ಅಂಬಾರಿ ಆನೆ ಆಗಲು ಬೇಕಾದ ಎಲ್ಲಾ ಗುಣಗಳನ್ನು ಹೊಂದಲಿದ್ದಾನೆ.

ಇಂಥಹ ಭೀಮನ ಜೀವನ ಕಥೆಯೇ ರೋಚಕವಾಗಿದೆ. 1 ವರ್ಷದ ಮರಿ ಇದ್ದಾಗಲೇ ತಾಯಿಯನ್ನ ಕಳೆದುಕೊಂಡು ತಬ್ಬಲಿಯಾಗಿದ್ದ ಭೀಮ ಸತತ 16 ವರ್ಷಗಳಿಂದ ಆನೆ ಶಿಬಿರದಲ್ಲೇ ಬೆಳೆದಿದ್ದಾನೆ. ಮತ್ತಿಗೂಡು ಆನೆ ಕ್ಯಾಂಪ್‍ನಲ್ಲಿ ಬೆಳೆದಿರುವ ಭೀಮ ಆನೆ, ಹುಲಿ ಸೆರೆ ಕಾರ್ಯಾಚರಣೆ, ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ನಿಪುಣತೆ ಸಾಧಿಸಿದ್ದಾನೆ.

 

ಅಂಬಾರಿ ಹೊರುವ ಎಲ್ಲಾ ಲಕ್ಷಣಗಳನ್ನ ಹೊಂದಿರುವ ಭೀಮನಿಗೆ ದಸರಾದಲ್ಲಿ ಹೆಚ್ಚಿನ ಮಹತ್ವ ಸಿಕ್ಕಿದೆ. ಈ ಬಾರಿ ಉತ್ತಮ ರೀತಿಯಲ್ಲಿ ನಡವಳಿಕೆ ಇದ್ದರೆ ಮುಂದಿನ ವರ್ಷಗಳಲ್ಲಿ ಭೀಮನಿಗೆ ಆದ್ಯತೆ ಇನ್ನೂ ಹೆಚ್ಚಾಗಲಿದೆ. ಅನಾಥನಾದರೂ ಮಾವುತರು ಹಾಗೂ ಇಲಾಖೆ ಮೆಚ್ಚುಗೆಗೆ ಪಾತ್ರವಾಗಿರುವ ಭೀಮ, ಈ ಬಾರಿ ಮೆರವಣಿಗೆ ಹಾಗೂ ಸಿಡಿಮದ್ದಿನ ಶಬ್ದಕ್ಕೆ ಹೆದರದಿದ್ದರೆ ಪರೀಕ್ಷೆಯಲ್ಲಿ ಪಾಸಾಗಿ, ಮುಂದಿನ ಬಾರಿಯಿಂದ ಭಾರ ಹೊರಿಸಿ ತಾಲೀಮಿನಲ್ಲಿ ತೊಡಗಲಿದ್ದಾನೆ.

Comments

Leave a Reply

Your email address will not be published. Required fields are marked *