ವಿದ್ಯುತ್ ತಂತಿ ಬಿದ್ದು ಮನೆ ಸುಟ್ಟು ಕರಕಲು

ಉಡುಪಿ: ಮನೆ ಮೇಲೆ ವಿದ್ಯುತ್ ತಂತಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆ ಬ್ರಹ್ಮಾವರದ ಹೇರಾಡಿಯಲ್ಲಿ ಬೆಂಕಿ ಅವಘಡ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ನಡೆದಿಲ್ಲ.

ವಿದ್ಯುತ್ ಹರಿಯುತ್ತಿದ್ದ ತಂತಿ ಬಿದ್ದೊಡನೆ ಭಾಗಶಃ ಮನೆ ಸುಟ್ಟು ಭಸ್ಮವಾಗಿದೆ. ಮಹಮ್ಮದ್ ಎಂಬವರ ಮನೆ ಇದಾಗಿದ್ದು, ಅವಘಡ ನಡೆದು ಗಂಟೆಗಳು ಕಳೆದರೂ ಅಗ್ನಿಶಾಮಕ ದಳ ಸ್ಥಳಕ್ಕೆ ಬರಲು ವಿಳಂಬವಾಗಿದೆ. ಸ್ಥಳೀಯರೇ ಬೆಂಕಿ ಹತೋಟಿಗೆ ತಂದಿದ್ದಾರೆ. ಘಟನೆಯಲ್ಲಿ ಸುಮಾರು ಆರು ಲಕ್ಷ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕೊಠಡಿಗಳು, ಮನೆಯೊಳಗಿದ್ದ ಸೊತ್ತು ಸುಟ್ಟು ಕರಕಲಾಗಿದೆ. ವಿದ್ಯುತ್ ಶಾಕ್ ಗೆ ಗೋಡೆಗಳು ಬಿರುಕುಬಿಟ್ಟದೆ. ಫ್ರಿಡ್ಜ್- ವಾಷಿಂಗ್ ಮಷಿನ್ ಸುಟ್ಟು ಕರಕಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಒಟ್ಟು ನಷ್ಟ ಮತ್ತು ಅವಘಡಕ್ಕೆ ಕಾರಣ ಏನು ಅಂತ ಮೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *