ನಡುಗಡ್ಡೆಯಲ್ಲಿ ಸಿಲುಕಿದ ಚುನಾವಣಾ ಅಧಿಕಾರಿಗಳು

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣ ನದಿ ನೀರಿನಿಂದ ನಡುಗಡ್ಡೆಗಳಾಗಿರುವ ಗ್ರಾಮಗಳಲ್ಲಿ ಮತದಾನ ಕಾರ್ಯಕ್ಕೆ ತೆರಳಿದ್ದ ಚುನಾವಣಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪರದಾಡಿದರು.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುರ್ವಕುಲ ಹಾಗು ಕುರ್ವಕುರ್ದಾಕ್ಕೆ ತೆರಳಿದ್ದ ಸಿಬ್ಬಂದಿ ವಾಪಸ್ ಬರಲು ತೆಪ್ಪ ಇಲ್ಲದೆ ಸುಮಾರು ಹೊತ್ತು ನದಿದಂಡೆಯಲ್ಲೇ ಪರದಾಡಬೇಕಾಯಿತು. ತೆಪ್ಪ ನಡೆಸುವ ಅಂಬಿಗರಿಲ್ಲದೆ ಚುನಾವಣಾ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.

ಕೃಷ್ಣಾ ನದಿಗೆ ಜುರಾಲಾ ಆಣೆಕಟ್ಟೆ ಕಟ್ಟಿದ ನಂತರ ಈ ಗ್ರಾಮಗಳು ನಡುಗಡ್ಡೆಯಾಗಿದ್ದು ಸೇತುವೆ ಕಾರ್ಯ ಅಪೂರ್ಣವಾಗಿರುವುದರಿಂದ ನದಿ ದಾಟಲು ಪರದಾಡುವಂತಾಗಿದೆ.

Comments

Leave a Reply

Your email address will not be published. Required fields are marked *