ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವ್ಯಕ್ತಿಯೇ ಮಿಸ್ಸಿಂಗ್!

ಚಿಕ್ಕಬಳ್ಳಾಪುರ: ಚುನಾವಣೆಗೆ ಸ್ವತಂತ್ರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ನಡೆದಿದೆ.

ಗಂಗನಹಳ್ಳಿ ಗ್ರಾಮದ ಮೋಹನ್ ನಾಪತ್ತೆಯಾದ ಅಭ್ಯರ್ಥಿ. ಮೋಹನ್ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದರು.

ನಾಮಪತ್ರ ಪರಿಶೀಲನೆ ದಿನವಾದ ಏಪ್ರಿಲ್ 27 ರಂದು ಮನೆಯಿಂದ ಹೊರ ಹೋದ ಮೋಹನ್ ಮತ್ತೆ ಮನಗೆ ಬಂದಿಲ್ಲ. ತೋಟದ ಬಳಿ ಮೋಟಾರ್ ರಿಪೇರಿ ಮಾಡಿಸಿ ಬರ್ತೀನಿ ಅಂತ ಸ್ಕೂಟರ್ ನಲ್ಲಿ ಹೋದ ಮೋಹನ್ ಮತ್ತೆ ಮನಗೆ ವಾಪಾಸ್ಸಾಗಿಲ್ಲ.

ಈ ಸಂಬಂಧ ಭಯಬೀತರಾದ ಮೋಹನ್ ತಂದೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *