ಎಸ್‍ಪಿ ಡಿವೈಎಸ್‍ಪಿ ನಡುವೆ ಹಗ್ಗ-ಜಗ್ಗಾಟ..!

ಬೆಂಗಳೂರು: ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಕಿರುಕುಳ ನೀಡಿರುವ ಪ್ರಕರಣಗಳನ್ನು ನೋಡಿರುತ್ತೇವೆ. ಆದರೆ ಮಹಿಳಾ ಎಸ್.ಪಿ ಒಬ್ಬರು ತನ್ನ ಕಿರಿಯ ಅಧಿಕಾರಿಗಳಿಗೆ ಚಿತ್ರಹಿಂಸೆ ನೀಡುತ್ತಿರು ಆರೋಪಕ್ಕೆ ಗುರಿಯಾಗಿದ್ದು, ವರ್ತನೆ ಖಂಡಿಸಿ ಎಸ್‍ಪಿ ಕಚೇರಿ ಮುಂದೆಯೇ ಡಿವೈಎಸ್‍ಪಿ ಪ್ರತಿಭಟನೆ ನಡೆಸಿದ್ದಾರೆ.

ರೈಲ್ವೇ ಎಸ್.ಪಿ ಚೈತ್ರಾ ಅವರ ವಿರುದ್ಧ ಇಂತಹ ಆರೋಪ ಕೇಳಿ ಬರುತ್ತಿದ್ದು, ತಮ್ಮ ಕೆಳಹಂತದ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯುವುದು ಅಷ್ಟೇ ಅಲ್ಲದೆ, ಕುಟುಂಬದ ಸದಸ್ಯರನ್ನು ಅವಾಚ್ಯ ಪದಗಳಿಂದ ಬೈಯುತ್ತಾರೆ. ಅಷ್ಟೇ ಅಲ್ಲದೆ ಚೈತ್ರಾ ಅವರಿಗೆ ರಾಜಕೀಯ ಬೆಂಬಲ ಇದೆ ಅಂತಾ ಹೀಗೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.

ಚೈತ್ರಾ ಅವರ ನಡೆಯಿಂದಾಗಿ ಬೇಸತ್ತ, ರೈಲ್ವೇ ಡಿವೈಎಸ್‍ಪಿ ಶ್ರೀನಿವಾಸ್ ರೆಡ್ಡಿ ಎಸ್‍ಪಿ ಕೊಠಡಿ ಮುಂದೆ ಕುಳಿತು ಪ್ರತಿಭಟಿಸಿದ್ದಾರೆ. ರಜೆ ಕೇಳಿದರೆ ಸಕಾಲಕ್ಕೆ ಕೊಡುವುದಿಲ್ಲ. ಎಲ್ಲರಿಗೂ ಓಓಡಿ ಮಾಡುವಂತೆ ಹಿಂಸೆ ಕೊಡುತ್ತಾರೆ. ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೈತ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಡಿಜಿಪಿ ಎನ್ ಶಿವಕುಮಾರ್ ಅವರಿಗೆ ಶ್ರೀನಿವಾಸ ರೆಡ್ಡಿ ಮೌಖಿಕವಾಗಿ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *